ಸಾರವಾಡ ಗ್ರಾಮಸ್ಥರ ಪ್ರತಿಭಟನೆ: ಎಲ್ಲ ಬಸ್‌ಗಳ ನಿಲುಗಡೆ; ಗ್ರಾಮಸ್ಥರಿಂದ ಹರ್ಷ

ಸಾರವಾಡ ಗ್ರಾಮಸ್ಥರ ಪ್ರತಿಭಟನೆ: ಎಲ್ಲ ಬಸ್‌ಗಳ ನಿಲುಗಡೆ; ಗ್ರಾಮಸ್ಥರಿಂದ ಹರ್ಷ Protest by Sarawad villagers: All buses stopped

ವಿಜಯಪುರ  25: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ, ವಾಯವ್ಯ ಕರ್ನಾಟಕ ಸಾರಿಗೆ ಬಸ್‌ಗಳ ನಿಲುಗಡೆಗೆ ಆಗ್ರಹಿಸಿ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಲು ಕಳೆದ ಆಗಷ್ಟ್‌ 14 ರಂದು ಗ್ರಾಮಸ್ಥರು ಮೂರು ಗಂಟೆಗಳ ಕಾಲ ಸಾರವಾಡ ಗ್ರಾಮದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಸ್ ನಿಲುಗಡೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದರು. ಭರವಸೆ ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಆಗಷ್ಟ್‌ 26 ರಂದು ಮರಳಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಲಾಗಿತ್ತು.ಬಬಲೇಶ್ವರ ಮಾರ್ಗವಾಗಿ ಪ್ರತಿದಿನ ನಗರ ಸಾರಿಗೆ 2 ಬಸ್ಸುಗಳನ್ನು ಬಿಡುವುದಾಗಿ ಲಿಖಿತ ಭರವಸೆ ನೀಡಿದ್ದಕ್ಕೆ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಹಾಗೂ ಸಾರವಾಡ ಗ್ರಾಮದ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.