ಡಿಪ್ಲೋಮಾ ವಿದ್ಯಾಥರ್ಿಗಳ ಪ್ರೋಜೆಕ್ಟ ಪ್ರದರ್ಶನ: ಉಪನ್ಯಾಸಕ ಟಿ.ಎಸ್.ವಂಟಗುಡಿ ಅಭಿಮತ ಪ್ರತಿಭೆಯ ಸಮರ್ಪಕ ಬಳಸಿಕೆಯಿಂದ ಜೀವನದಲ್ಲಿ ಬದಲಾವಣೆ ಸಾಧ್ಯ
ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಡಿಪ್ಲೋಮಾ ವಿದ್ಯಾಥರ್ಿಗಳ ಪ್ರೋಜೆಕ್ಟ ಪ್ರದರ್ಶನವನ್ನು ಉದ್ಘಾಟಿಸುತ್ತಿರುವ ಹಾರೂಗೇರಿ
ರಾಯಬಾಗ 05: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಕಲೆ ಅಡಗಿರುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಜೀವನದ ಬದಲಾವಣೆಯ ಹಂತವನ್ನು ಕಾಣುತ್ತೇವೆ ಎಂದು ಹಾರೂಗೇರಿ ಸಿದ್ಧೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಟಿ.ಎಸ್.ವಂಟಗುಡಿ ಹೇಳಿದರು.
ಇತ್ತಿಚೆಗೆ ರಾಯಬಾಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಡಿಪ್ಲೋಮಾ ವಿದ್ಯಾಥರ್ಿಗಳ ಪ್ರೋಜೆಕ್ಟ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾಥರ್ಿಗಳು ತಾಂತ್ರಿಕ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಕಲಿಕೆ ಮತ್ತು ಗಳಿಕೆ ಜೀವನೂದ್ದಕ್ಕೂ ಸಾಗುತ್ತದೆ, ವಿದ್ಯಾಥರ್ಿಗಳು ಹೆಚ್ಚಿನ ಜ್ಞಾನ ಪಡೆದುಕೊಂಡು ಉನ್ನತ ಹುದ್ದೆ ಪಡೆಯಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ರೇಣುಕಾ ಶುಗರ್ಸನ ಜನರಲ್ ಮ್ಯಾನೇಜರ ಜಾಕಿಅಹಮದ್ ಶೇಖ ಮಾತನಾಡಿ, ಯಾವ ವಿದ್ಯಾಥರ್ಿಗಳು ತಮ್ಮ ತಂದೆ-ತಾಯಂದಿರಿಗೆ ಗೌರವ ನೀಡುತ್ತಾರೋ ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ವಿದ್ಯಾಥರ್ಿ ಜೀವನ ಅತ್ಯಮೂಲ್ಯವಾಗಿದೆ ಎಂದರು.
ಕಾಲೇಜಿನ ಉಪಪ್ರಾಚಾರ್ಯ ಹಾಗೂ ಮೆಕ್ಯಾನಿಕಲ ವಿಭಾಗದ ಮುಖ್ಯಸ್ಥಎಸ್.ವಿ.ದೇಸಾಯಿ ಶೈಕ್ಷಣಿಕ ವಾಷರ್ಿಕ ವರದಿ ವಾಚಿಸಿದರು. ಅಂತಿಮ ವರ್ಷದ ವಿದ್ಯಾಥರ್ಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ರೇಣುಕಾ ಶುಗರ್ಸನ ಅಭಿಯಂತರ ಎ.ಜಿ. ಪಾಟೀಲ, ಆಡಳಿತಾಧಿಕಾರಿ ಪಿ.ಬಿ. ಬೆಳ್ಳಿ, ಪ್ರಾಚಾರ್ಯ ಎಂ.ಎಸ್.ಮಗದುಮ, ಎಸ್.ವಿ.ದೇಸಾಯಿ, ಎಲ್.ಕೆ.ಸಂತೋಷ, ಎಮ್.ಆರ್.ಜೇಡರ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಆರ್.ಎ.ಅನ್ವೇಕರ ಸ್ವಾಗತಿಸಿ, ನಿರೂಪಿಸಿದರು. ಎಲ್.ಬಿ.ದಲಾಲ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 