ಐದು ವೃತ್ತಗಳಿಗೆ ಮಹಾತ್ಮರ ಹೆಸರುಗಳನ್ನಿಡಲು ಸಭೆಯಲ್ಲಿ ಮಂಜೂರಾತಿ
ಮಹಾಲಿಂಗಪುರ 04: ಮಂಗಳವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ವೃತ್ತ, ದೇವರ ದಾಸಿಮಯ್ಯ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಹೇಮರೆಡ್ಡಿ ಮಲ್ಲಮ್ಮ ವೃತ್ತ ಮತ್ತು ಸಂಗೋಳ್ಳಿ ರಾಯಣ್ಣ ವೃತ್ತಗಳಿಗೆ ಸಭೆ ಸರ್ವಾನುಮತದ ಒಪ್ಪಿಗೆ ನೀಡಿದ ಕಾರಣ ಪುರಸಭೆ ಅಧ್ಯಕ್ಷರು ಈ ಎಲ್ಲ ವೃತ್ತಗಳಿಗೆ ಸಮ್ಮತಿಸಿ ಠರಾವಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಜೆಪಿ ಸದಸ್ಯ ಬಸವರಾಜ ಚಮಕೇರಿ ವಿನಾಕಾರಣ ಸಾರ್ವಜನಿಕ ಕರ ಪೋಲು ಮಾಡದೆ ಬಡ ಮಕ್ಕಳಿಗೆ ಸ್ಕಾಲರ್ಶಿಪ್ ಮೊತ್ತ ಹೆಚ್ಚಳ ಮಾಡಿ, ತುಟ್ಟಿ ಜಮಾನಾದ ಈ ದಿನಗಳಲ್ಲಿ ಅವರಿಗೆ ಈ ಮೊತ್ತ ಆಸರೆಯಾಗುತ್ತದೆ ಎಂದು ಅಧ್ಯಕ್ಷರಿಗೆ ಮನವಿ ಮಾಡಿದರು. ಮೂರು ವರ್ಷಗಳಿಂದ ಟೆಂಡರ್ ಆಗಿಯೂ ಕೆಲಸ ಆಗದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೋರ್ವ ಬಿಜೆಪಿಯ ರವಿ ಜವಳಗಿ ಮಾತನಾಡಿ ಹಿಂದೂ ರುದ್ರಭೂಮಿ ಸ್ವಚ್ಛತೆ, ಬಸವೇಶ್ವರ ವೃತ್ತದಲ್ಲಿ ಮಳೆಯಿಂದ ಕೊಳಚೆ ನಿರ್ಮಾಣ ನಿರ್ಮೂಲನೆ, ಸೌಜನ್ಯ ನೇಕಾರ ಕಾಲೊನಿಯ ಫಲಾನುಭವಿಗಳಿಗೆ ಸೂರು ಒದಗಿಸುವ ಕುರಿತು ಸಭೆಯ ಗಮನ ಸೆಳೆದರು.
ಕಾಂಗ್ರೆಸ್ ಪಕ್ಷದ ಸದಸ್ಯ ಬಸವರಾಜ ಬುರುಡ ತಮ್ಮದು ಚಿಕ್ಕ ಮತ್ತು ಆರ್ಥಿಕ ಹಿಂಜರಿತ ಸಮಾಜ ನಮ್ಮ ಬಹು ದಿನಗಳ ಸಮುದಾಯ ಭವನಕ್ಕೆ ಪಟ್ಟಣದಲ್ಲಿ ನಿವೇಶನ ಒದಗಿಸಬೇಕೆಂದು ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅವರನ್ನು ಆಗ್ರಹಿಸಿದರು.
ಹಿಂದಿನ ಠರಾವುಗಳನ್ನು ಧೃಡಿಕರಿಸುವುದು, ಪ್ರಸ್ತುತ ಸಾಲಿನ ಮಾರ್ಚ, ಎಪ್ರಿಲ್ ಜಮಾ ಖರ್ಚು, 15 ನೇ ಹಣಕಾಸು ಕ್ರಿಯಾ ಯೋಜನೆಗೆ ಮತ್ತು ಎಸ್.ಎಫ್.ಸಿ 24.10, 7.2, 5 , 1ರ ಅಡಿ ಮಂಜೂರಾತಿ, ಜಲಶುಧ್ಧಿಕರಣ ಘಟಕದ ಭೂ ಬಾಡಿಗೆ, ತಾಂತ್ರಿಕ ಕಾಮಗಾರಿಗಳ ದರ ಮುನ್ನಿರಿಕ್ಷಿಸಿ ದರಗಳಿಗೆ ಅನುಮೋದನೆ, ಆರೋಗ್ಯ ವಿಭಾಗಕ್ಕೆ ಮುನ್ನಿರಿಕ್ಷೆಯ ಟೆಂಡರ್, 2025-26 ನೇ ಸಾಲಿನ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ದರಕ್ಕೆ ಅನುಮೋದನೆ,
ಕಳೆದ ಸಾಲಿನ ಆರೋಗ್ಯ ವಿಭಾಗಕ್ಕೆ ಟೆಂಡರ್ ದರಕ್ಕೆ ಪ್ರಸ್ತುತ ವರ್ಷದಲ್ಲಿಯೂ ಅದೇ ದರಕ್ಕೆ ಮುಂದುವರಿಸುವ ಕುರಿತು, ಖಾಯಂ ಪೌರ ಕಾರ್ಮಿಕರು, ಹೊರ ಗುತ್ತಿಗೆ ವಾಹನ ಚಾಲಕರು ಮತ್ತು ಇತರೆ ಸ್ವಚ್ಛತಾ ಕಾರ್ಮಿಕರಿಗೆ ಉಪಹಾರಕ್ಕೆ ಟೆಂಡರ್ ಕರೆಯುವ ಕುರಿತು ಹೀಗೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆದು ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಆಡಳಿತದ ಮತ್ತು ವಿರೋಧ ಪಕ್ಷವಾದ ಬಿಜೆಪಿಯ ಸದಸ್ಯರು ಎಲ್ಲ ಚರ್ಚೆಯ ವಿಷಯಗಳಿಗೆ ಅನುಮೋದನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಮುಸ್ತಾಕ್ ಚಿಕ್ಕೋಡಿ, ಬಸವರಾಜ ಹಿಟ್ಟಿನಮಠ, ಬಸವರಾಜ ಯರಗಟ್ಟಿ, ಸವಿತಾ ಹುರಕಡ್ಲಿ, ಸರಸ್ವತಿ ರಾಮೋಜಿ ಮಾತನಾಡಿದರು.ಮುಖ್ಯಾಧಿಕಾರಿ ಈರಣ್ಣ ದಡ್ಡಿ ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿದರು. ಪುರಸಭೆ ವ್ಯವಸ್ಥಾಪಕ ಎಸ್ ಎನ್. ಪಾಟೀಲ್ ಸಭೆ ನಡಾವಳಿ ಓದಿ ಹೇಳಿದರು.ಅಧಿಕಾರಿಗಳಾದ ಎಂ ಎನ್.ಮುಗಳಖೋಡ, ಸಿಕಂದರ ಕಲಬುರ್ಗಿ,ಪಿ ವಾಯ. ಸೊನ್ನದ ಚರ್ಚೆಯ ವಿಷಯಗಳಿಗೆ ಉತ್ತರ ನೀಡಿ ಅನುಮೋದನೆ ಪಡೆದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷಿಣಿ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಬಾಗವಾನ,ಪುರಸಭೆ ಸದಸ್ಯರಾದ ಸಜನಸಾಬ್ ಪೆಂಡಾರಿ,ರಾಜು ಗೌಡಪ್ಪಗೊಳ, ಸ್ನೇಹಲ ಅಂಗಡಿ, ಭಾವನಾ ಪಾಟೀಲ,ಚಾಂದನಿ ನಾಯಕ, ಗೋದಾವರಿ ಬಾಟ, ಸುಜಾತಾ ಮಾಂಗ, ಸವಿತಾ ಕೊಳ್ಳಿಗುಡ್ಡ,ನಾಮ ನಿರ್ದೇಶಿತ ಸದಸ್ಯರಾದ ವಿನೋದ ಸಿಂಪಿ, ಆನಂದ ಬಂಡಿ, ಲಕ್ಕಪ್ಪ ಭಜಂತ್ರಿ, ಬಸವರಾಜ ಕರೆಹೊನ್ನ, ಪಾಪಾ ನಾಲಬಂದ, ಪುರಸಭೆಯ ವಿಕ್ರಮ ಹವಾಲ್ದಾರ, ಅರುಣ ಸಣ್ಣಕ್ಕಿ ,ರಾಜೇಶ್ವರಿ ಸೊರಗಾಂವಿ,ಚನ್ನಮ್ಮ ಪಟ್ಟಣಶೆಟ್ಟಿ, ಸಿಪಾಯಿಗಳಾದ ರಾಮು ಮಾಂಗ,ಮಹಾಲಿಂಗ ಮಾಂಗ ಇದ್ದರು.