ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ Program launched by planting a sapling

ಲೋಕದರ್ಶನ ವರದಿ  

ಇಂಡಿ 07 : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಇಂಡಿ ಆಡಳಿತ ಮಂಡಳಿಯ ಸರ್ವಸಾದರಣ ಸಭೆಯನ್ನು ಲೋಣಿ ಬಿ.ಕೆ ಗ್ರಾಮದ ಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯ ಸವಿನೆನಪಿಗಾಗಿ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆ ಆವರಣದಲ್ಲಿ ಸಸಿ ನಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಇಂಡಿ ಪಿ.ಎಲ್‌.ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಮ್‌.ಕೋರೆ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಆರ್‌.ಜೆ.ಜಾಗಿರ್ದಾರ, ಬ್ಯಾಂಕ್ ನಿರ್ದೇಶಕ ಪಿ.ಎನ್‌.ಮೂರಮಾನ, ಪಿ.ಎಸ್‌.ಕುಂಬಾರ, ಆರ್‌.ಎಸ್‌.ಬಿರಾದಾರ, ಎಸ್‌.ಯು.ಪಾಟೀಲ, ಬಿ.ಎಸ್‌.ಬಿರಾದರ, ಎನ್‌.ಬಿ.ಮಂಗಂಡ, ಬಿ. ಬಿರಾದಾರ, ಎಸ್‌.ಎಸ್‌.ಬಗಲಿ, ಆರ್‌.ಎಸ್‌.ಪೂಜಾರಿ, ಎಲ್‌.ಎ.ನಡಗೇರಿ, ಕೆ.ವಿ.ಡೋಮನಾಳ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.