‘ಅರಳಲಿ ಬೆಳಕಿನ ನಾಳೆ’ ಸರಣಿಯ ವಿಜೇತ ಕೇಳುಗರ ಬಹುಮಾನ ವಿತರಣಾ ಮತ್ತು ರಜತ ಮಹೋತ್ಸವ
Prize distribution and silver jubilee for the winning listeners of the ‘Aralali Ayyot Mana’ series
ಲೋಕದರ್ಶನ ವರದಿ
ಧಾರವಾಡ 16 : ಆಕಾಶವಾಣಿಯ ಶಾಲ್ಮಲಾ ಸಭಾಂಗಣದಲ್ಲಿ ಧಾರವಾಡ ಮಕ್ಕಳ ಆಕಾಡೆಮಿ ಮತ್ತು ಆಕಾಶವಾಣಿ, ಧಾರವಾಡ ಸಹಯೋಗದಲ್ಲಿ ಪ್ರಸಾರಗೊಂಡ ‘ಅರಳಲಿ ಬೆಳಕಿನ ನಾಳೆ’ ಸರಣಿಯ ವಿಜೇತ ಕೇಳುಗರ ಬಹುಮಾನ ವಿತರಣಾ ಮತ್ತು ರಜತ ಮಹೋತ್ಸವ ಗ್ರಂಥಕರ್ತರಿಗೆ ಹಾಗೂ ಪ್ರಾಯೋಜಕರಿಗೆ ಗೌರವ ಸನ್ಮಾನ ಸಮಾರಂಭಕ್ಕೆ ಡಾ. ಎಸ್.ಎಮ್. ಶಿವಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕು ಎಂದರು. ಮುಂದುವರೆದು ಮಾತನಾಡುತ್ತಾ ಭೂಮಿ, ಪರಿಸರ, ನೀರು ಇವುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ ಎಂದರು.
ಅಧ್ಯಕ್ಷತೆಯನ್ನು ಆಕಾಶ ವಾಣಿಯ ಸಹಾಯಕ ನಿರ್ದೇಶಕ ಶರಣಬಸವ ಚೋಳಿನ್ ವಹಿಸಿ ಮಾತನಾಡಿದರು. ಮಕ್ಕಳ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಡಾ. ರಾಜನ್ ದೇಶಪಾಂಡೆ ಮಾತನಾಡುತ್ತ ಮಕ್ಕಳ ಅಕಾಡೆಮಿ ಬೆಳೆದು ಬಂದ ದಾರಿಯನ್ನು ವಿವರಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಯು. ಬೆಳ್ಳಕ್ಕಿ ಅತಿಥಿಗಳ ಪರಿಚಯ ಮಾಡಿದರು. ಮಂಜುಳಾ ಪುರಾಣಿಕ ಸ್ವಾಗತಿಸಿದರು. ಡಾ. ಎಮ್. ವೈ. ಸಾವಂತ್ ವಂದಿಸಿದರು. ಮಾಯಾ ರಾಮನ್ ನಿರೂಪಿಸಿದರು. ಸಮಾರಂಭದಲ್ಲಿ ಅಕಾಡೆಮಿಯ ಸದಸ್ಯರಾದ ಕವಿತಾ ದೇಶಪಾಂಡೆ, ಡಾ.ಸ್ನೇಹಾ ಜೋಶಿ, ಡಾ. ಐ.ಎಸ್. ಮಳೇಕರ್, ಡಾ. ಬಾಳಣ್ಣ ಚಿನಗುಡಿ, ಶ್ರೀಕಾಂತ್ ದೊಡವಾಡ, ಡಾ. ವೆಂಕಮ್ಮ ಗಾಂವಕರ್, ಸತೀಶ್ ಪರ್ವತಿಕರ್ ಮತ್ತು ಡಾ. ಸಿ.ಗು. ಹಿರೇಮಠ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 