‘ಅರಳಲಿ ಬೆಳಕಿನ ನಾಳೆ’ ಸರಣಿಯ ವಿಜೇತ ಕೇಳುಗರ ಬಹುಮಾನ ವಿತರಣಾ ಮತ್ತು ರಜತ ಮಹೋತ್ಸವ
Prize distribution and silver jubilee for the winning listeners of the ‘Aralali Ayyot Mana’ series
ಲೋಕದರ್ಶನ ವರದಿ
ಧಾರವಾಡ 16 : ಆಕಾಶವಾಣಿಯ ಶಾಲ್ಮಲಾ ಸಭಾಂಗಣದಲ್ಲಿ ಧಾರವಾಡ ಮಕ್ಕಳ ಆಕಾಡೆಮಿ ಮತ್ತು ಆಕಾಶವಾಣಿ, ಧಾರವಾಡ ಸಹಯೋಗದಲ್ಲಿ ಪ್ರಸಾರಗೊಂಡ ‘ಅರಳಲಿ ಬೆಳಕಿನ ನಾಳೆ’ ಸರಣಿಯ ವಿಜೇತ ಕೇಳುಗರ ಬಹುಮಾನ ವಿತರಣಾ ಮತ್ತು ರಜತ ಮಹೋತ್ಸವ ಗ್ರಂಥಕರ್ತರಿಗೆ ಹಾಗೂ ಪ್ರಾಯೋಜಕರಿಗೆ ಗೌರವ ಸನ್ಮಾನ ಸಮಾರಂಭಕ್ಕೆ ಡಾ. ಎಸ್.ಎಮ್. ಶಿವಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕು ಎಂದರು. ಮುಂದುವರೆದು ಮಾತನಾಡುತ್ತಾ ಭೂಮಿ, ಪರಿಸರ, ನೀರು ಇವುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ ಎಂದರು.
ಅಧ್ಯಕ್ಷತೆಯನ್ನು ಆಕಾಶ ವಾಣಿಯ ಸಹಾಯಕ ನಿರ್ದೇಶಕ ಶರಣಬಸವ ಚೋಳಿನ್ ವಹಿಸಿ ಮಾತನಾಡಿದರು. ಮಕ್ಕಳ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಡಾ. ರಾಜನ್ ದೇಶಪಾಂಡೆ ಮಾತನಾಡುತ್ತ ಮಕ್ಕಳ ಅಕಾಡೆಮಿ ಬೆಳೆದು ಬಂದ ದಾರಿಯನ್ನು ವಿವರಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಯು. ಬೆಳ್ಳಕ್ಕಿ ಅತಿಥಿಗಳ ಪರಿಚಯ ಮಾಡಿದರು. ಮಂಜುಳಾ ಪುರಾಣಿಕ ಸ್ವಾಗತಿಸಿದರು. ಡಾ. ಎಮ್. ವೈ. ಸಾವಂತ್ ವಂದಿಸಿದರು. ಮಾಯಾ ರಾಮನ್ ನಿರೂಪಿಸಿದರು. ಸಮಾರಂಭದಲ್ಲಿ ಅಕಾಡೆಮಿಯ ಸದಸ್ಯರಾದ ಕವಿತಾ ದೇಶಪಾಂಡೆ, ಡಾ.ಸ್ನೇಹಾ ಜೋಶಿ, ಡಾ. ಐ.ಎಸ್. ಮಳೇಕರ್, ಡಾ. ಬಾಳಣ್ಣ ಚಿನಗುಡಿ, ಶ್ರೀಕಾಂತ್ ದೊಡವಾಡ, ಡಾ. ವೆಂಕಮ್ಮ ಗಾಂವಕರ್, ಸತೀಶ್ ಪರ್ವತಿಕರ್ ಮತ್ತು ಡಾ. ಸಿ.ಗು. ಹಿರೇಮಠ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 