ಪ್ರಧಾನ ಮಂತ್ರಿ ಯೋಜನೆಗಳು: ಪ್ರಬಂಧಸ್ಪರ್ಧೇ

ಪ್ರಧಾನ ಮಂತ್ರಿ ಯೋಜನೆಗಳು: ಪ್ರಬಂಧಸ್ಪರ್ಧೇ Prime Minister's Schemes: Essay Competition

 ಗದಗ 01 : ನಗರದ ಪ್ರತಿಷ್ಠಿತ ಕೆ. ಎಲ್‌. ಇ.ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗದಗದಲ್ಲಿ,ಎನ್‌. ಎಸ್‌. ಎಸ್ ಘಟಕದ ವತಿಯಿಂದ ಇತ್ತೀಚಿಗೆ ಪ್ರಧಾನ ಮಂತ್ರಿ ಯೋಜನೆಗಳು ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಪ್ರಬಂಧಸ್ಪರ್ಧೆಯನ್ನು ಸೋರಟೂರು ಗ್ರಾಮದ ತೋಂಟದಾರ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಆಯೋಜಿಸಿತ್ತು.ಪ್ರಧಾನ ಮಂತ್ರಿ ಯೋಜನೆ ಬಗ್ಗೆ ಅರಿವು ಮೂಡಿಸಲು ಮತ್ತು ಮಾಹಿತಿಯನ್ನು ನೀಡಲು ಎನ್‌. ಎಸ್‌. ಎಸ್‌. ತಂಡಗಳು ಈ ಸ್ಪರ್ಧೆಯನ್ನುಪದವಿ ಪೂರ್ವ ವಿದ್ಯಾರ್ಥಿಗಳಿಗೆ ನೇಡೆಸಿದರು,ಪ್ರಶಸ್ತಿ ವಿಜೇತರು ಈ ಕೆಳಗಿನಂತಿದ್ದಾರೆ:   

ಪ್ರಥಮ ಬಹುಮಾನ : ಕುಮಾರಿ. ಸಾವಿತ್ರಿ ಡೋಣಿ  

ದ್ವಿತೀಯ ಬಹುಮಾನ : ಕುಮಾರಿ. ಯಲ್ಲಮ್ಮ ತೋಪಿನ  

ತೃತೀಯ ಬಹುಮಾನ : ಕುಮಾರಿ. ಪಾರ್ವತಿ ಫ. ಕಮ್ಮಾರ  

ಆ ಪದವಿ ಪೂರ್ವ ಕಾಲೇಜಿನ ಶಿಕ್ಷಕರು ತೀಪುಗಾರರಾಗಿ ಉಪಸ್ಥಿತರಿದ್ದರು, ಎನ್‌. ಎಸ್‌. ಎಸ್‌. ಕಾರ್ಯಕ್ರಮ ಅಧಿಕಾರಿ ಪ್ರೊ. ವಾಗೀಶ್ ಜಿ. ರೇಶ್ಮಿ, ಎನ್‌. ಎಸ್‌. ಎಸ್ ಘಟಕದ ಕಾರ್ಯನಿರ್ವಾಹಕರಾದ ಕುಮಾರಿ. ನೀಲಮ್ಮ ಸೀತಾರಳ್ಳಿ ಕುಮಾರ. ಆಕಾಶ ಕಳಗಣ್ಣನವರ, ಎನ್‌. ಎಸ್‌. ಎಸ್‌. ತಂಡಗಳ ನಾಯಕರು ಕುಮಾರ. ಮಹಾದೇವಪ್ಪ ಬೊಳನವರ, ಕುಮಾರ. ಪಕ್ಕೀರೇಶ ಒಂಟಿ ಮತ್ತು ಎನ್‌. ಎಸ್‌. ಎಸ್‌. ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.