ಅಭಿವೃದ್ಧಿಯತ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
Primary Agricultural Credit Cooperative Society Towards Development
ಕಂಪ್ಲಿ 21 : ಸಮೀಪದ ಹೊಸ ದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಛೇರಿ ಆವರಣದಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಸಂಘವು 4390 ಸದಸ್ಯರನ್ನು ಒಳಗೊಂಡಿದ್ದು, 104.09 ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿದೆ. ಕೆಸಿಸಿ, ಮಧ್ಯಮಾವಧಿ, ಬಿಡಿಸಿಸಿ,ಮೀನು ಸಾಕಾಣಿಕೆ ಸಾಲ ಸೇರಿದಂತೆ ಸುಮಾರು 708.06. ಕೋಟಿ ಸಾಲ ವಿತರಿಸಿದೆ.
ಸಂಘವು ಸರ್ವ ಸದಸ್ಯರ ಹಾಗೂ ಗ್ರಾಮದ ಮುಖಂಡರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿ ಕಾಣುತ್ತಿದೆ ಎಂದರು. ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಮಲ್ಲಿಕಾರ್ಜುನ ಅವರು ಲೆಕ್ಕ ಪತ್ರ, ಆಡಿಟ್ ವರದಿ ಮಂಡಿಸಿದರು. ಸಂಘವು ಲೆಕ್ಕ ಪರಿಶೋಧನೆಯಲ್ಲಿ “ಎ” ಶ್ರೇಣಿಯನ್ನು ಪಡೆದಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಲಿ ಮಸೀದಿ,ನಿರ್ದೇಶಕರಾದ ಪಿ.ಎಸ್.ಲಿಂಗಪ್ಪ, ಕೆ.ರಾಮಾಂಜಿನೇಯ್ಯ, ವೆಂಕಟೇಶ್ ಸಾಲುಮನೆ, ಶ್ರೀನಿವಾಸ.ಡಿ., ದಾನಪ್ಪ ಎಚ್., ತಿಮ್ಮಯ್ಯ.ಕೆ., ಮರಿ್ರಸ್ವಾಮಿ ನಾಯಕರು, ಶೋಭಾದೇವಿ ವಿ.ಟಿ., ನಾಗಮ್ಮ, ಎನ್.ವಿ.ಹನುಮಂತ, ರವಿಪ್ರಕಾಶ್.ಎ., ಮುಖಂಡರಾದ ಮಾದಾಪುರ ಮಾರೆಪ್ಪ,ವಿ.ಭೀಮಪ್ಪ, ವಿ.ಕಾಳಪ್ಪ, ಕೆ.ಈರಣ್ಣ, ವಿ.ಹನುಮಂತಪ್ಪ, ಎನ್.ವಿ.ಷಣ್ಮುಖಪ್ಪ, ಕೆ.ಅಂಬಣ್ಣ,ಡಿ.ರಾಮಾಂಜಿನೇಯ್ಯ, ಸೇರಿದಂತೆ ಗ್ರಾಮದ ಮುಖಂಡರು,ಹಾಮಾಲಿ ಸಂಘದ ಸದಸ್ಯರು ಹಾಗೂ ಸಂಘದ ಸಿಬ್ಬಂದಿ,ರೈತರು ಪಾಲ್ಗೊಂಡಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 7.20.ಲಕ್ಷ ರೂಗಳ ನಿವ್ವಳ ಲಾಭಗಳಿಸಿದೆ ಎಂದು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ವಿ.ಮಂಜುನಾಥ್ ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 