ಅಭಿವೃದ್ಧಿಯತ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
Primary Agricultural Credit Cooperative Society Towards Development
ಕಂಪ್ಲಿ 21 : ಸಮೀಪದ ಹೊಸ ದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಛೇರಿ ಆವರಣದಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಸಂಘವು 4390 ಸದಸ್ಯರನ್ನು ಒಳಗೊಂಡಿದ್ದು, 104.09 ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿದೆ. ಕೆಸಿಸಿ, ಮಧ್ಯಮಾವಧಿ, ಬಿಡಿಸಿಸಿ,ಮೀನು ಸಾಕಾಣಿಕೆ ಸಾಲ ಸೇರಿದಂತೆ ಸುಮಾರು 708.06. ಕೋಟಿ ಸಾಲ ವಿತರಿಸಿದೆ.
ಸಂಘವು ಸರ್ವ ಸದಸ್ಯರ ಹಾಗೂ ಗ್ರಾಮದ ಮುಖಂಡರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿ ಕಾಣುತ್ತಿದೆ ಎಂದರು. ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಮಲ್ಲಿಕಾರ್ಜುನ ಅವರು ಲೆಕ್ಕ ಪತ್ರ, ಆಡಿಟ್ ವರದಿ ಮಂಡಿಸಿದರು. ಸಂಘವು ಲೆಕ್ಕ ಪರಿಶೋಧನೆಯಲ್ಲಿ “ಎ” ಶ್ರೇಣಿಯನ್ನು ಪಡೆದಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಲಿ ಮಸೀದಿ,ನಿರ್ದೇಶಕರಾದ ಪಿ.ಎಸ್.ಲಿಂಗಪ್ಪ, ಕೆ.ರಾಮಾಂಜಿನೇಯ್ಯ, ವೆಂಕಟೇಶ್ ಸಾಲುಮನೆ, ಶ್ರೀನಿವಾಸ.ಡಿ., ದಾನಪ್ಪ ಎಚ್., ತಿಮ್ಮಯ್ಯ.ಕೆ., ಮರಿ್ರಸ್ವಾಮಿ ನಾಯಕರು, ಶೋಭಾದೇವಿ ವಿ.ಟಿ., ನಾಗಮ್ಮ, ಎನ್.ವಿ.ಹನುಮಂತ, ರವಿಪ್ರಕಾಶ್.ಎ., ಮುಖಂಡರಾದ ಮಾದಾಪುರ ಮಾರೆಪ್ಪ,ವಿ.ಭೀಮಪ್ಪ, ವಿ.ಕಾಳಪ್ಪ, ಕೆ.ಈರಣ್ಣ, ವಿ.ಹನುಮಂತಪ್ಪ, ಎನ್.ವಿ.ಷಣ್ಮುಖಪ್ಪ, ಕೆ.ಅಂಬಣ್ಣ,ಡಿ.ರಾಮಾಂಜಿನೇಯ್ಯ, ಸೇರಿದಂತೆ ಗ್ರಾಮದ ಮುಖಂಡರು,ಹಾಮಾಲಿ ಸಂಘದ ಸದಸ್ಯರು ಹಾಗೂ ಸಂಘದ ಸಿಬ್ಬಂದಿ,ರೈತರು ಪಾಲ್ಗೊಂಡಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 7.20.ಲಕ್ಷ ರೂಗಳ ನಿವ್ವಳ ಲಾಭಗಳಿಸಿದೆ ಎಂದು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ವಿ.ಮಂಜುನಾಥ್ ಹೇಳಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 