ವರುಣನ ಕೃಪೆಗಾಗಿ ಪ್ರಾರ್ಥಿಸಿ ಧರ್ಮಾಪುರ ಬಸವಣ್ಣ ದೇವರಿಗೆ ಪರವು

ವರುಣನ ಕೃಪೆಗಾಗಿ ಪ್ರಾರ್ಥಿಸಿ ಧರ್ಮಾಪುರ ಬಸವಣ್ಣ ದೇವರಿಗೆ ಪರವು Pray for the grace of Varuna and seek the favor of God Basavanna of Dharmapura.

 ಲಕ್ಷ್ಮೇಶ್ವರ" 22 : ಪ್ರಸ್ತುತ ವರ್ಷದ ಮುಂಗಾರು ಮಳೆ ಸರಿಯಾಗಿ ಯಾಗದೆ ಅನ್ನದಾತರು ಬಿತ್ತನೆ ಮಾಡಿದ ಮುಂಗಾರು ಬೆಳೆಗಳಾದ ಹೆಸರು ಅಲಸಂದಿ ಮೆಕ್ಕೆಜೋಳ ಶೇಂಗಾ ಹತ್ತಿ ಬೆಳೆಗಳು ಮಳೆ ಕೊರತೆಯಿಂದ ಬಾಡುವ ಹಂತದಲ್ಲಿ ತಲುಪಿವೆ ಇದರಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಿರುವ ಅನ್ನದಾತರು ನಮಗೆ ಬಂದ ಕಷ್ಟವನ್ನು ದೂರಮಾಡಿ ಮುನಿಸಿಕೊಂಡಿರುವ ವರುಣ ದೇವರು ಕೃಪೆ ತೋರಿ ಸಮೃದ್ಧಿ ಮಳೆಯಾಗಲಿ ಉತ್ತಮ ಬೆಳೆ ಬರಲಿ ಎಂದು ರೈತ ಬಾಂಧವರ ಆರಾಧ್ಯ ದೇವರಾದ ಧರ್ಮಾಪುರ ಬಸವಣ್ಣ ದೇವರಿಗೆ ಹಳ್ಳದಕೇರಿ ಓಣಿಯ ಸಮಸ್ತ ರೈತ ಬಾಂಧವರು ಬಂಡಿ ಉತ್ಸವದ ಮೂಲಕ ಸಕಲ ವಾದ್ಯ, ವೈಭವದೊಂದಿಗೆ ಬಹಳಷ್ಟು ವಿಜೃಂಭಣೆಯಿಂದ ಬಸವಣ್ಣ ದೇವರಿಗೆ ಪರುವುನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಮಿಸಿದರು  ಪಟ್ಟಣದ ಹಳ್ಳದಕೇರಿಯಿಂದ ಸಾಗಿದ ಬಂಡಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಧರ್ಮಾಪುರ ಬಸವಣ್ಣ ದೇವರ ದೇವಸ್ಥಾನ ತಲುಪಿ ವಿಶೇಷ ಪೂಜೆ ಸಲ್ಲಿಸಿ ಮಹಾಪ್ರಸಾದವನ್ನು ನೆರವೇರಿಸಿದರುಈ ಸಂದರ್ಭದಲ್ಲಿ ಓಣಿಯ ಎಲ್ಲಾ ಗುರು ಹಿರಿಯರು ತಾಯಂದಿರು ಯುವಕರು ಮಕ್ಕಳು ಪಾಲ್ಗೊಂಡಿದ್ದರು.