ರಾಯಬಾಗ 12: ಇಂಡಿಯನ್ ಫಾರೆಸ್ಟ್ ಸರ್ವಿಸ್ ಯುಪಿಎಸ್ಸಿ ಪರೀಕ್ಷೆಯಲ್ಲಿ 129 ರ್ಯಾಂಕ್ ಪಡೆದು ಪಾಸ್ ಆಗಿರುವ ಚಿಕ್ಕೋಡಿ ತಾಲೂಕಿನ ಕಾಡಾಪೂರ ಗ್ರಾಮದ ಪ್ರವೀಣ ಹರೀಶ್ ಜಾದವ ಅವರನ್ನು ಬುಧವಾರ ಪಟ್ಟಣದ ರೈಲ್ವೆ ಸ್ಟೇಷನ ರಸ್ತೆಯ ಸ್ಟೇಷನ ಹಿಲ್ ದಲ್ಲಿ ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಅವರು ಸತ್ಕರಿಸಿದರು. ಪ.ಪಂ ಅಧ್ಯಕ್ಷ, ಅಶೋಕ ಅಂಗಡಿ, ಸಂತೋಷ್ ದೀಪಾಳೆ, ರಮೇಶ ಗಾಯಕ್ವಾಡ, ಸುನಿಲ ಗಾಯಕ್ವಾಡ, ಶೈನಾಥ ಗಾಯಕ್ವಾಡ, ರಮೇಶ ಕುಂಬಾರ, ವಸಂತ ಕಾಂಬಳೆ, ಶಿವಲಿಂಗ ಹಳಿಂಗಳಿ ಸೇರಿ ಅನೇಕರು ಇದ್ದರು.