ಜಾಲವಾದ ಕ್ಲಸ್ಟರಿನ ಪ್ರತಿಭಾ ಕಾರಂಜಿ

ಜಾಲವಾದ ಕ್ಲಸ್ಟರಿನ ಪ್ರತಿಭಾ ಕಾರಂಜಿ Pratibha Karanji at Jalawad school

ದೇವರಹಿಪ್ಪರಗಿ 24: ಮಕ್ಕಳಲ್ಲಿ ಅಡಗಿರುವ ನವೀನ ಸಾಮರ್ಥ್ಯಗಳನ್ನು ಅಳೆಯುವಲ್ಲಿ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಜಾಲವಾದ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಎ.ಎಮ್‌.ಹೊಸಗೌಡರ ಹೇಳಿದರು.  

ತಾಲೂಕಿನ ಜಾಲವಾದ ಗ್ರಾಮದ ಕೆಜಿಎಸ್ ಹಾಗೂ ಕೆಬಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಜಾಲವಾದ ಕ್ಲಸ್ಟರಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ಸಿ.ಆರಿ​‍್ಪ.ಕಾಶೀಮ ವಾಲೀಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಯ ನಿಯಮಗಳು ಹಾಗೂ ನಿರ್ಣಾಯಕರ ಕಾರ್ಯವೈಖರಿಯ ಬಗ್ಗೆ ತಿಳಿಸಿಕೊಟ್ಟರು. ಎಸ್‌.ಡಿ.ಎಮ್‌.ಸಿ.ಉಪಾಧ್ಯಕ್ಷ ರಾಜು ಗುಂದಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.   

ಕ್ಲಸ್ಟರಿನ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು .ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ.ಎಸ್‌.ಬೇವನೂರ, ತಾಲ್ಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್‌.ವಾಲೀಕಾರ, ಪ್ರಧಾನ ಕಾರ್ಯದರ್ಶಿ ಪಿ.ಸಿ.ತಳಕೇರಿ, ಎನ್‌.ಜಿ.ಓ.ಅಧ್ಯಕ್ಷ ನಾಗೇಶ ನಾಗೂರ, ಪಿಯು ಕಾಲೇಜಿನ ಹುಣಶ್ಯಾಳ, ಕೆಜಿಎಸ್ ಶಾಲೆಯ ಮುಖ್ಯಗುರು ಡಿ.ಎ.ಇನಾಮದಾರ, ಗ್ರಾಮ ಪಂಚಾಯತಿ ಸಿಬ್ಬಂದಿ, ಎಸ್‌.ಡಿ.ಎಮ್‌.ಸಿ.ಸದಸ್ಯರು, ಎಲ್ಲಾ ಶಾಲೆಗಳ ಮುಖ್ಯಗುರುಗಳು, ತೀರ​‍್ುಗಾರ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.  

ಶಿಕ್ಷಕರಾದ ಅಪ್ಪಾಸಾಹೇಬ ಕರಿಕಬ್ಬಿ ನಿರೂಪಿಸಿದರು. ಎಸ್‌.ಎಮ್‌.ಚವ್ಹಾಣ ಸ್ವಾಗತಿಸಿದರು. ವಿಶ್ವರಾಜ ಬೋರಗಿ ವಂದಿಸಿದರು.