ಮಾರ್ಚ್‌ 1 ರಂದು ಅಯ್ಯಪ್ಪ ದೇವಾಲಯದಲ್ಲಿ ಪ್ರಭಾತ ಸಂಗೀತ ಕಾರ್ಯಕ್ರಮ

ಮಾರ್ಚ್‌ 1 ರಂದು ಅಯ್ಯಪ್ಪ ದೇವಾಲಯದಲ್ಲಿ ಪ್ರಭಾತ ಸಂಗೀತ ಕಾರ್ಯಕ್ರಮ Prabhata Sangeet program at Ayyappa Temple on March 1st


ಬಳ್ಳಾರಿ 22:  ಹರಿದಾಸ ಪರಂಪರೆಯ ಶ್ರೇಷ್ಠ ಸಂತರಾದ ತ್ಯಾಗರಾಜರು ಮತ್ತು ಪುರಂದರ ದಾಸರ ಆರಾಧನೆ ಪ್ರಯುಕ್ತ ಬಳ್ಳಾರಿ ಮ್ಯೂಸಿಕ್ ಕ್ಲಬ್ ಇವರು ಮಾರ್ಚ್‌ 1 ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ಕರ್ನಾಟಕ ಸಂಗೀತ ಕಚೇರಿ ಪ್ರಭಾತ ಸಂಗೀತ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 10.30 ಕ್ಕೆ ಸಂಗೀತ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ವಿದುಷಿ ಸ್ಮೃತಿ ಭಾಸ್ಕರ್ ಅವರು ಕರ್ನಾಟಕ ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ. ನಗರದ ಅನಂತಪುರ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ದೈವಿಕ ಆವರಣದಲ್ಲಿ ಭಾವಪೂರ್ಣ ಸಂಗೀತವನ್ನು ಆನಂದಿಸಲು ಅಂದು ಕುಟುಂಬ ಸಮೇತರಾಗಿ ಆಗಮಿಸಬಹುದು. ಆಸಕ್ತ ಅಭ್ಯರ್ಥಿಗಳು ಸಂಗೀತ ಕಾರ್ಯಾಗಾರ ನೋಂದಣಿಗಾಗಿ   ಮಾಯಾ ಪಿ. ರಾವ್ +91 97390 97388 ಮತ್ತು ಡಾ. ವೀಣಾ +91 94800 12300 ಅವರನ್ನು ಸಂಪರ್ಕಿಸಬಹುದು.