ಈರಣ್ಣ ಗದಿಗೆಪ್ಪ ಬಳಗಾವಿ ಅವರ ಮರಣೋತ್ತರ ದೇಹದಾನ: ಜೈಂಟ್ಸ್ ಐ ಫೌಂಡೇಶನ್ನ ಮುಂದಾಳತ್ವ
Posthumous donation of Iranna Gadigeppa Balagavi
ಬೆಳಗಾವಿ 06: ವಜೆ ಗಲ್ಲಿ, ವಡಗಾವ್ ನಿವಾಸಿ ಈರಣ್ಣ ಗದಿಗೆಪ್ಪ ಬಳಗಾವಿ ಅವರು ವೃದ್ಧಾಪ್ಯದಿಂದ ನಿಧನರಾದರು. ನಿಧನ ಸಮಯದಲ್ಲಿ ಅವರ ವಯಸ್ಸು 92 ವರ್ಷವಾಗಿತ್ತು. ಹಲವು ವರ್ಷಗಳಿಂದ ಅವರು ತಮ್ಮ ಪತ್ನಿಯೊಂದಿಗೆ ಮಲ್ಲಿಕಾರ್ಜುನ ದೇವಸ್ಥಾನದ ನೋಡಿಕೊಳ್ಳುವ ಕಾರ್ಯ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಪತ್ನಿಯ ನಿಧನದ ನಂತರ ಅವರು ಒಬ್ಬರೇ ವಾಸವಾಗಿದ್ದರು.
ಅವರ ನಿಧನದ ಸುದ್ದಿ ತಿಳಿದ ತಕ್ಷಣ ಜೈಂಟ್ಸ್ ಐ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮದನ್ ಬಾಮಣೆ ಅವರು ವಡಗಾವಿನ ಕುರುಹಿಣಶೆಟ್ಟಿ ಸಮಾಜದ ಬಂಧುಗಳೊಂದಿಗೆ ಚರ್ಚೆ ನಡೆಸಿ ದೇಹದಾನದ ಬಗ್ಗೆ ಮಾಹಿತಿ ನೀಡಿದರು. ಅವರ ಸಮ್ಮತಿಯ ನಂತರ ದೇಹವನ್ನು ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಲಾಯಿತು. ಜೊತೆಗೆ ಕೆಎಲ್ಇ ನೇತ್ರಪೇಡಿಗೆ ನೇತ್ರದಾನ ಮಾಡಲಾಗಿದ್ದು, ಕೆಎಲ್ಇ ರೋಟರಿ ಸ್ಕಿನ್ ಬ್ಯಾಂಕ್ಗೆ ತ್ವಚಾದಾನ ಮಾಡಲಾಗಿದೆ.
ಈರಣ್ಣ ಅವರ ದೇಹದಾನದಿಂದ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ನೇತ್ರದಾನದ ಮೂಲಕ ಇಬ್ಬರು ಅಂಧರಿಗೆ ಲೋಕವನ್ನು ನೋಡುವ ಅವಕಾಶ ಸಿಗಲಿದೆ. ತ್ವಚಾದಾನದಿಂದ ಅಗತ್ಯವಿರುವವರಿಗೆ ನೆರವು ದೊರೆಯಲಿದೆ.
ಜೈಂಟ್ಸ್ ಐ ಫೌಂಡೇಶನ್ ಪರವಾಗಿ ಬಸವರಾಜ ಅತ್ತಿಮರದ, ಶ್ರೀಧರ ತಿಗಡಿ, ನಿಜಗುಣಿ ಬಸಾಪುರ, ಮಹೇಶ್ ಭೈರ್ಪನ್ನವರ, ಗುರುಸಿದ್ದಪ್ಪ ತಿಗಡಿ, ಪ್ರವೀಣ ದೋಡಮನಿ, ವಿಜಯ ಹಳಗಿ, ಶಶಿಧರ ಚಲ್ಲಾಪಿಲ್ಲಿ, ಶಿವಾನಂದ ದೋಡಮನಿ, ಮಲ್ಲಿಕಾರ್ಜುನ ಯಳ್ಳೂರು, ಉಮೇಶ್ ಕಲ್ಲೇದ, ಈರಣ್ಣ ಹಳಗಿ ಹಾಗೂ ಸಮಾಜ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಲಾಗಿದೆ. ಪ್ರತಿಯೊಂದು ಯುವಕ ಮಂಡಳಿ ಮತ್ತು ಪಂಚ ಮಂಡಳಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಇಂತಹ ಸಾಮಾಜಿಕ ಕರ್ತವ್ಯವನ್ನು ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶ್ರೀ ಮದನ್ ಬಾಮನೆ - 94481 91266
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 