ನಾಟಕಗಳು ಗ್ರಾಮೀಣ ಜನರ ಸಂಸ್ಕೃತಿಯ ಪ್ರತೀಕ

ರಾಣೇಬೆನ್ನೂರು18: ಇತಿಹಾಸದಲ್ಲಿ ನಮ್ಮ ಕಲಾ ಪರಂಪರೆಗೆ ಬಹುದೊಡ್ಡ ಗೌರವ ಮಾನ, ಮನ್ನಣೆ ಇತ್ತು ಆಧುನಿಕ ಬದುಕಿನಲ್ಲಿ ನೈಜ ಸಂಸ್ಕೃತಿಯ ಕಲೆ ನಶಿಸಿ ಹೊಗುತ್ತಲಿದೆ.  ನಾಟಕಗಳು ಮತ್ತು ಕಲಾವಿದರು ಉಳಿದು ಬೆಳೆಯಬೇಕಾದರೆ, ಜನಾಶ್ರಯದ ಅಗತ್ಯವಿದೆ ಎಂದು ಪ್ರಗತಿಪರ ರೈತ ವಿಷ್ಣಪ್ಪ ಕಂಬಳಿ ಹೇಳಿದರು.

ಅವರು ತಾಲೂಕಿನ ಹಳೆಹೊನ್ನತ್ತಿ ಗ್ರಾಮದಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ಕಮಿಟಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಕಲಾವಿದೆ ಯಶೋಧಾ ಗುಡಗುಡಿ ತಂಡದವರು  ಪ್ರದಶಿಸಿದ  ಸಿಡಿದೆದ್ದ ಸೂರ್ಯ ಚಂದ್ರ ನಾಟಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಭಾಗದಲ್ಲಿ ನಿತ್ಯ ನಿರಂತರ ನಾಟಕಗಳು ಜೀವಂತವಾಗಿದ್ದವು.  ಅದಕ್ಕೆ ಅಂದಿನ ಜನರು ಅತ್ಯಂತ ಪ್ರೀತಿ-ವಿಶ್ವಾಸದಿಂದ ಗೌರವ ನೀಡುವುದರ ಜೊತೆಗೆ ಸ್ವತ: ಹಣವನ್ನು ಹಾಕಿಕೊಂಡು ನಾಟಕ ಪ್ರದರ್ಶನ ಮಾಡುವ ಪರಂಪರೆ ಇಲ್ಲಿತ್ತು.  ಬದಲಾದ ವಾತಾವರಣದಲ್ಲಿ ನಿಜವಾದ ಕಲೆಗಳು ಮಾಯವಾಗುತ್ತಿವೆ. ಯಶೋದಾ ಗುಡಗುಡಿ ತಂಡದವರು ಇಂತಹ ನಾಟಕ ಕಲೆಯನ್ನು ಪ್ರದಶರ್ಿಸುತ್ತಿರುವುದು ಜೀವಂತಿಕೆಯ ಲಕ್ಷಣವಾಗಿದೆ. 

ಮಂಜಪ್ಪ ಬಿ. ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಮಲಕಪ್ಪ ಬೆನ್ನೂರು, ಹಾಲಪ್ಪ ಮಾಗನೂರ, ಚಿತ್ರಶೇಖರ ತಿಮ್ಮೇನಹಳ್ಳಿ, ಮಂಜು ಎಸ್.ಧೂಳಪ್ಪನವರ, ದುರ್ಗಪ್ಪ ಸೋ ನಿಟ್ಟೂರು, ನಾಗಪ್ಪ ಭಜಂತ್ರಿ ಸೇರಿದಂತೆ ತಂಡದ ಕಲಾವಿದರು, ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.