ಜನರಿಗೊಬ್ಬ ‘ನಾಯಕ’ ಬೇಕೇ: ಉಪ್ಪಿ
ಬೆಂಗಳೂರು, ಜ 11,ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಜನರ ತಲೆಗೆ ಹುಳ ಬಿಡುವ ನಟ, ರಾಜಕಾರಣಿ ಉಪೇಂದ್ರ ‘ನಾಯಕ’ ಬೇಕೇ ಎಂದು ಪ್ರಶ್ನಿಸಿದ್ದಾರೆ “ಸರ್ಕಾರದ ಬೊಕ್ಕಸದಲ್ಲಿರುವ ಒಂದೊಂದು ಪೈಸೆಯೂ ನಿಮ್ಮದು ಅಂದಮೇಲೆ ಅದರ ಮೇಲಿನ ಅಧಿಕಾರ,ನಿರ್ಧಾರ ನಿಮ್ಮದೇ ಆಗಿರಬೇಕಲ್ಲವೇ ? ಬರೀ ಸಂಬಳಕ್ಕೆ ಕೆಲಸ ಮಾಡುವ ಕಾರ್ಮಿಕ ಮತ್ತು ತಂತ್ರಜ್ಞಾನದಿಂದ ಇದನ್ನು ನೀವೇ ಮಾಡಬಹುದು ಎಂದಾದರೆ ಒಬ್ಬ ನಾಯಕ ನಿಮಗೆ ಬೇಕೇ ?” ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, “ವಿಚಾರ” ಮುಖ್ಯ “ನಾನು” ಎಂಬುದು ಪ್ರಜಾಕೀಯದಲ್ಲಿ ಮುಖ್ಯವಲ್ಲ ಎಂದು ಹೇಳುತ್ತಲೇ ಬರುತ್ತಿದ್ದೇವೆ. ಆ ಅರ್ಥದಲ್ಲೇ ಉಪ್ಪಿ ಚುನಾವಣೆಗೆ ನಿಲ್ಲುವುದು ಬಿಡುವುದು ಮುಖ್ಯವಲ್ಲ ನಾಯಕನ ನಿರೀಕ್ಷೆ ಬೇಡ , ವ್ಯಕ್ತಿ, ಪಕ್ಷ ನೋಡದೇ ವಿಚಾರಕ್ಕೆ ಮತ ನೀಡಬೇಕು ಎಂದು ಹೇಳಿದ್ದೆ. ಇದು ಸರಿಯಲ್ಲವೇ ? ಈ ವ್ಯವಸ್ಥೆ ತರುವುದೇ ನಮ್ಮೆಲ್ಲರ ಜವಾಬ್ದಾರಿಯಲ್ಲವೇ ಎಂದು ಉಪೇಂದ್ರ ಕೇಳಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 