ಜನ ಜಾನುವಾರಗಳಿಗೆ ಸಮರ​‍್ಕವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಸೂಚನೆ

ಜನ ಜಾನುವಾರಗಳಿಗೆ ಸಮರ​‍್ಕವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಸೂಚನೆ People advised to solve drinking water problem for livestock effectively

ಲೋಕದರ್ಶನ ವರದಿ

ಕಂಪ್ಲಿ 07:  ಬೇಸಿಗೆಯ ತಾಪಮಾನ ಏರಿಕೆ ಮತ್ತು ಕುಡಿಯುವ ನೀರಿನ ಕೊರತೆಯನ್ನು ನಿಭಾಯಿಸಲು, ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಡೆದ ತಾಲೂಕು ಮಟ್ಟದ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆಯಲ್ಲಿ ಸಾರ್ವಜನಿಕರಿಗೆ ಹಾಗೂ ಜನಜಾನುಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಗುರುವಾರ ಕೈಗೊಳ್ಳಲಾಯಿತು.   ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಂಬಂಧ ಯಾವುದೇ ತೊಂದರೆ ಆಗದಂತೆ ನಿಗಾವಹಿಸಿ ಸಾರ್ವಜನಿಕರಿಗೆ ಗುಣಮಟ್ಟದ ಶುದ್ಧ ನೀರು ಒದಗಿಸಲು ಅಧಿಕಾರಿಗಳು ಸಮನ್ವಯತೆಯಿಂದ ಸೂಕ್ತ ಕ್ರಮಕೈಗೊಳ್ಳಬೇಕು.

ಈ ಹಿಂದೆ ಮಾರ್ಚ್‌ ತಿಂಗಳಲ್ಲಿ ಸಭೆ ನಡೆಸಲಾಗಿತ್ತು. ಆದರೆ, ಈಗ ಬಿಸಿಲಿನ ಪ್ರಮಾಣ ಅಧಿಕವಾಗಿದ್ದು, ಅಂತರ್ಜಲ ಕುಸಿತದ ಹಿನ್ನಲೆ ಕುಡಿಯುವ ನೀರಿನ ಸಮಸ್ಯೆ ತಕೆ ದೋರುವ ಪರಿಣಾಮ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಮರ​‍್ಕವಾಗಿ ಕುಡಿಯುವ ನೀರು ಒದಗಿಸಬೇಕು. ನೀರಿನ ಟ್ಯಾಬ್ಗಳನ್ನು ಹಾಕಿಸಿ, ಮಿತವಾಗಿ ನೀರು ಬಳಕೆಯೊಂದಿಗೆ ಮತ್ತೊಬ್ಬರಿಗೆ ನೀರು ಕಲ್ಪಿಸುವ ನಿಟ್ಟಿನಲ್ಲಿ ಜಾಗೃತಿವಹಿಸಬೇಕಾಗಿದೆ. ಆ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸೂಚಿಸಿದರು. 

ನಂತರ ತಾಪಂ ಇಒ ಆರ್‌.ಕೆ.ಶ್ರೀಕುಮಾರ ಮಾತನಾಡಿ, ತಾಲೂಕಿನಲ್ಲಿ ಬಹುತೇಕವಾಗಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ಈಗಾಗಲೇ ಮುಂಜಾಗ್ರತಾ ಕ್ರಮವಹಿಸಲಾಗಿದೆ. ಉಪ್ಪಾರಹಳ್ಳಿ ಫ್ಲೋರೈಡ್ ನೀರಿನ ಹಿನ್ನಲೆ ನಿರಂತರವಾಗಿ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ಜನತೆಗೆ ನೀರು ಕಲ್ಪಿಸಲಾಗುತ್ತಿದೆ. ಈಗಾಗಲೇ ಜೆಜೆಎಂ ಕಾಮಗಾರಿಗಳು ಮುಗಿದಿದ್ದು, ಗ್ರಾಮಗಳಲ್ಲಿ ಪೈಪ್ ಲೈನ್ ಮೂಲಕ ನೀರು ಸಂಪರ್ಕಕ್ಕೆ ಜನರು ಅವಕಾಶ ಮಾಡಿಕೊಡುತ್ತಿಲ್ಲ. ಏನೇ ಆಗಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ ಎಂದರು. 

ನೆಲ್ಲುಡಿ-ಕೊಟ್ಟಾಲ್ ಗ್ರಾಮದ 5ನೇ ವಾರ್ಡಿನಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯೆ ಉಂಟಾಗಿದೆ. ಜೆಜೆಎಂ ಪೈಪ್ ಲೈನ್ ಮೂಲಕ ನೀರು ಹೋಗುತ್ತಿಲ್ಲ ಎಂದು ಪಿಡಿಒ ಅಪರಂಜಿ ತಿಳಿಸಿದರು. ಇದಕ್ಕೆ ಇಒ ಪ್ರತಿಕ್ರಿಯಿಸಿ ಅಲ್ಲಿನ ಟ್ಯಾಂಕ್ಗಳಿಗೆ ಓವರ್ ಲೋಡ್ ನೀರಿನ ಮೂಲಕ ಬೇರೆ ಕಡೆ ಸಾಗಿಸದಂತೆ ಇದೇ ವಾರ್ಡಿಗೆ ನೀರು ಕಲ್ಪಿಸಿ ಎಂದು ಸಲಹೆ ನೀಡಿದರು.  ನಂ.10 ಮುದ್ದಾಪುರ ಗ್ರಾಪಂಯ ಪ್ರಭುಕ್ಯಾಂಪಿನಲ್ಲಿ ಬೋರ್ ವೆಲ್ ಗಳು ದುರಸ್ಥಿಯಲ್ಲಿದ್ದು, ಹತ್ತಿರದ ಪುರಸಭೆಯಿಂದ ನೀರು ಒದಗಿಸಬೇಕು. ಇಲ್ಲಿನ 150 ಕುಟುಂಬಗಳಿಗೆ ನೀರು ಕಲ್ಪಿಸಲು ಸಾಧ್ಯ ಎಂದು ಪಿಡಿಒ ಶಿಲ್ಪರಾಣಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಿರಸ್ತೇದಾರ ರಮೇಶ, ಕಂದಾಯ ನೀರೀಕ್ಷಕ ಜಗದೀಶ, ಪಿಡಿಒಗಳಾದ ಹಾಲರ್ವಿ ಶೇಷಗಿರಿ, ಬೀರಲಿಂಗ, ಮಲ್ಲಿಕಾರ್ಜುನ, ಶಶಿಕಾಂತ, ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.