ಏಕತೆಯಿಂದ ನಡೆದುಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ: ಶ್ರೀಗಳು
Peace will prevail in the world if we walk in unity: Shri
ರಾಯಬಾಗ 07: ಸರ್ವಧರ್ಮಗಳಲ್ಲಿ ಸೌಹಾರ್ದತೆ, ಏಕತೆಯಿಂದ ನಡೆದುಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ ಎಂದು ಸುಕ್ಷೇತ್ರ ಹಿಪ್ಪರಗಿಯ ಪ್ರಭುಜಿ ಮಹಾರಾಜರು ಹೇಳಿದರು.
ಶನಿವಾರ ತಾಲೂಕಿನ ಮೊರಬ ಗ್ರಾಮದ ಬಾನೆಸರಕಾರ ತೋಟದಲ್ಲಿ ಹಮ್ಮಿಕೊಂಡಿದ್ದ ಎಸ್.ಆರ್.ಬಾನೆಸರಕಾರ ಮತ್ತು ಗೋದಾವರಿ ಬಾನೆಸರಕಾರ ಅವರ ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನಸ್ಸು ಗೆದ್ದರೆ ಜಗತ್ತು ಗೆಲ್ಲಲು ಸಾಧ್ಯ. ನಮ್ಮ ಮನಸ್ಸು ಪರಮಾತ್ಮನ ಧ್ಯಾನದಲ್ಲಿ ಲೀನಗೊಳಿಸಿದರೆ ಮುಕ್ತಿ ಪಡೆಯಲು ಸಾಧ್ಯ ಎಂದು ಹೇಳಿದರು.
ಕೋಳಿಗುಡ್ಡ ಸುಜ್ಞಾನ ಕುಟೀರದ ಸ್ವರೂಪಾನಂದ ಸ್ವಾಮೀಜಿ, ಮುತ್ತೇಶ್ವರ ಸ್ವಾಮೀಜಿ, ಪರಸ್ಪ ಇಂಚಗೇರಿ, ಹಿರಿಯ ಧುರೀಣ ಡಿ.ಎಸ್.ನಾಯಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಯುವ ಧುರೀಣ ಸಂಜೀವಕುಮಾರ ಬಾನೆಸರಕಾರ, ಡಾ.ಎಸ್.ಎಸ್.ಬಾನೆ, ಡಾ.ಗಾಯತ್ರಿ ಬಾನೆ, ಧೂಳಗೌಡ ಪಾಟೀಲ, ಹಾಲಪ್ಪ ಘಾಳಿ, ಫಾರೂಕ ಮೋಮಿನ, ಶೀತಲ ಬೇಡಕಿಹಾಳೆ, ಬಿ.ಎನ್.ಬಂಡಗರ, ರಾಜು ತಳವಾರ, ರೇವಣ್ಣ ಸರವ, ರಾಜು ಬಡೋರೆ, ಜಿನ್ನಪ್ಪ ಬಡೋರೆ ಸೇರಿ ಅನೇಕರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 