ಜೂಲೈ 12 ರಂದು ವಡಕರಾಯ ದೇವಸ್ಥಾನದಲ್ಲಿ ಪವಮಾನ ಸೂಕ್ತ ಹೋಮ

 ಜೂಲೈ 12 ರಂದು ವಡಕರಾಯ ದೇವಸ್ಥಾನದಲ್ಲಿ ಪವಮಾನ ಸೂಕ್ತ ಹೋಮ  Pavamana Homa at Vadakaraya Temple on July 12

ಕೊಪ್ಪಳ, 11- ನಗರದ ಹುಲಿಕೆರೆ ರಸ್ತೆ ಸಿರಸಪ್ಪಯ್ಯನ ಓಣಿ ಪ್ರಸಿದ್ಧ ಶ್ರೀ ವಡಕರಾಯ ದೇವಸ್ಥಾನದಲ್ಲಿ  ಇಂದು ಜೂಲೈ 12 ರಂದು ಶನಿವಾರ ಪವಮಾನ ಸೂಕ್ತ ಹೋಮ ಜರುಗಲಿದೆ.  

ಈ ಕುರಿತು ಪ್ರಕಟಣೆ ನೀಡಿರುವ ದೇವಸ್ಥಾನ ಭಕ್ತಮಂಡಳಿ ಆಷಾಢಮಾಸ ಕೃಷ್ಣಪಕ್ಷ ದ್ವಿತೀಯ ಜೂಲೈ 12 ಶನಿವಾರ ವಿವಿಧ ದಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.  

ಅಂದು  ಬೆಳಿಗ್ಗೆ 6-00ಕ್ಕೆ ಶ್ರೀ ವಡಕರಾಯನ ಸ್ವಾಮಿಯ ಅಭಿಷೇಕ ನಂತರ ಮುಂಜಾನೆ 9-30ಕ್ಕೆ ಪವಮಾನ ಸೂಕ್ತ ಹೋಮ , 11-30ಕ್ಕೆ ವಾಯು ಸ್ತುತಿ ಸ್ತೋತ್ರ ಪಠಣ ನಂತರ ಮಧ್ಯಾಹ್ನ 12-30 ಕ್ಕೆ ಅತಿಥಿಗಳು ಮತ್ತು ಭಕ್ತಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ಜರುಗುವುದು, ನಂತರ ಮಧ್ಯಾಹ್ನ 1-30ಕ್ಕೆ ಅನ್ನಸಂತರೆ​‍್ಣ ನಡೆಯುವುದು. ಮಧ್ಯಾಹ್ನ 4-00 ಗಂಟೆಗೆ ಭಜನಾ ಕಾರ್ಯಕ್ರಮಗಳ ಜರುಗಲಿವೆ .  

ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು  ಭಾಗವಹಿಸಿ ಶ್ರೀ ವಡಕರಾಯನ ಕೃಪೆಗೆ ಪಾತ್ರರಾಗಬೇಕೆಂದು ಭಕ್ತ ಮಂಡಲಿ ಪ್ರಕಟಣೆಯಲ್ಲಿ ಕೋರಿದೆ.