13ರಂದು ನರೇಗಾ ಬಚಾವ್ ಸಂಗ್ರಾಮ ಸಭೆಗೆ ಭಾಗವಹಿಸಿ: ವೆಂಕಟೇಶ್ ಹೆಗಡೆ

13ರಂದು ನರೇಗಾ ಬಚಾವ್ ಸಂಗ್ರಾಮ ಸಭೆಗೆ ಭಾಗವಹಿಸಿ: ವೆಂಕಟೇಶ್ ಹೆಗಡೆ Participate in NREGA Bachao Sangram meeting on 13th: Venkatesh Hegde

 ಬಳ್ಳಾರಿ 11: ಕೇಂದ್ರ ಸರ್ಕಾರದ ನರೇಗಾ ರದ್ಧತಿ ವಿರುದ್ಧ “ನರೇಗಾ ಬಚಾವ್ ಸಂಗ್ರಾಮ ” ಹೋರಾಟಕ್ಕೆ ಂಋಅ ರೂಪುರೆಷೆಗಳನ್ನು ರೂಪಿಸಿದ್ದು, ಕರ್ನಾಟಕ ರಾಜ್ಯದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ  ಆ ಏ ಶಿವಕುಮಾರ ರವರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಅರಮನೆ ಆವರಣದ ಗಾಯತ್ರಿ ವಿಹಾರ ದಲ್ಲಿ ಏರಿ​‍್ಡಸಲಾಗಿದೆ.ಆದ್ದರಿಂದ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಬ್ಲಾಕ್ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಹಾಗೂ ಎಲ್ಲಾ ಪ್ರಮುಖ ನಾಯಕರ ಸಭೆಯನ್ನು ಕರೆದಿರುತ್ತಾರೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರುಗಳ ಸೂಚನೆಯಠೆ ಈ ಸಭೆಯಲ್ಲಿ ಪ್ರಚಾರ ಸಮಿತಿಯ ಸಹ ಅಧ್ಯಕ್ಷರುಗಳಾದ  ಡಾ.ಎಲ್ ಹನುಮಂತಯ್ಯ ರವರು, ರಾಜ್ಯಪದಾಧಿಕಾರಿಗಳು ಉಪಾಧ್ಯಕ್ಷರು,ಮುಖ್ಯ ಸಂಯೋಜಕರು,ಸಂಯೋಜಕರು ಹಾಗೂ ಜಿಲ್ಲಾಧ್ಯಕ್ಷರುಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಭಾಗವಹಿಸಬೇಕು, ಎಂದು ವೆಂಕಟೇಶ್ ಹೆಗಡೆ, ವಕೀಲರು ರಾಜ್ಯ ಸಂಯೋಜಕರು ಪ್ರಚಾರ ಸಮಿತಿ ಮತ್ತು ಕೆಪಿಸಿಸಿ ಮಾಧ್ಯಮ ವಕ್ತಾರರು ಇಂದು ಲೋಕದರ್ಶನ ಪತ್ರಿಕೆ  ಪ್ರಕಟಣೆ ತಿಳಿಸಿದರು.