ಮಕ್ಕಳ ಮನಸ್ಸನ್ನು ಹದಗೊಳಿಸಲು ಚಿತ್ರಕಲೆ ಬಹು ಮುಖ್ಯವಾದ ಕಲಾ ಪ್ರಕಾರ: ಡಾ.ರಾಜಶ್ರೀ ಗುದಗನವರ
Painting is a very important art form to shape children's minds: Dr. Rajashree Gudaganavara
ಧಾರವಾಡ 28: ಮಕ್ಕಳ ಮನಸ್ಸನ್ನು ಹದಗೊಳಿಸಲು ಚಿತ್ರಕಲೆ ಬಹು ಮುಖ್ಯವಾದ ಕಲಾ ಪ್ರಕಾರವಾಗಿದೆ.ಇಂದಿನ ಮಕ್ಕಳು ಮೊಬೈಲ್ನಲ್ಲಿ ಮುಳುಗುವ ಬದಲು ಸೃಜನಶೀಲರಾಗಬೇಕಿದೆ ಎಂದು ಡಾ.ರಾಜಶ್ರೀ ಗುದಗನವರ ಹೇಳಿದರು.
ಇಲ್ಲಿನ ರಜತಗಿರಿ ಬಡಾವಣೆಯ ಸಿಂಚನಾದಲ್ಲಿ ಏರಿ್ಡಸಿದ ಮಕ್ಕಳ ಚಿತ್ರಕಲೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಇಂತಹ ಕಲೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ಶೈಲಾ ಕರಗುದರಿ ಮಾತನಾಡಿ, ನಮ್ಮ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಾರ್ಥಕ ಕೆಲಸದಲ್ಲಿ ಅಮೃತಾ ಜೋಶಿಯವರು ತೊಡಗಿಕೊಂಡಿರುವದು ಶ್ಲಾಘನೀಯ ಎಂದು ಹೇಳಿದರು.
ನಮ್ಮ ಪರಂಪರೆ,ಸಂಸ್ಕೃತಿ ಮತ್ತು ಶೈಲಿ ಇವೆಲ್ಲ ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ, ದಸರಾದಲ್ಲಿ ಐದು ದಿನಗಳವರೆಗೆ ಮಕ್ಕಳಿಗೆ ದೇವಿ ಚಿತ್ರ ಬಿಡಿಸಲು ಶ್ರಮಿಸಿದೆ ಎಂದು ಸಂಯೋಜಕಿ ಅಮೃತಾ ಜೋಶಿ ತಿಳಿಸಿದರು.
ಫಾಲ್ಗುಣಿ, ದಿವಾ, ಪವನ, ಶ್ರೇಯಾ ಮತ್ತು ಸ್ಪೂರ್ತಿ ಮಕ್ಕಳೆಲ್ಲ ದುರ್ಗಾ ದೇವಿಯ ಮುಖವನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಪ್ರೊ.ಸುರೇಶ ಗುದಗನವರ ಅಧ್ಯಕ್ಷತೆ ವಹಿಸಿದ್ದರು.
ಪೂರ್ಣಿಮಾ ಗಂಭೀರ, ಅನುಪಮಾ ಶೆಟ್ಟಿ, ಪೂಜಾ ಕರೋಲೆ, ವರ್ಷಾ ಹಂಚಿನಮನಿ, ಶ್ರೀಕಾಂತ ಸಿ.ಕೆ. , ಗಾಳಿ, ಪಾಟೀಲ ಇತರರು ಇದ್ದರು.
ರಶ್ಮೀ ಭಾರದ್ವಾಜ್ ನಿರೂಪಿಸಿ , ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 