ವಿನಾಯಕನಿಗೆ ಪಡಿ ಪೂಜೆ ಹಾಗೂ ಮಹಾ ಮಂಗಳಾರತಿ

ವಿನಾಯಕನಿಗೆ ಪಡಿ ಪೂಜೆ ಹಾಗೂ ಮಹಾ ಮಂಗಳಾರತಿ Padi Puja and Maha Mangala Aarti to Lord Vinayaka

ಗದಗ 01 :  ನಗರ ಹೃದಯ ಭಾಗದ ಸಾಂಸ್ಕೃತಿಕ ನಗರಿ ಬಸವೇಶ್ವರ ನಗರದ ಶ್ರೀ ವರಸಿದ್ಧಿ ವಿನಾಯಕ ಮಿತ್ರ ಮಂಡಳಿ ವತಿಯಿಂದ 133 ನೇ ವರ್ಷದ ಸಾರ್ವಜನಿಕ ಹಾಗೂ ನಮ್ಮ ಮಂಡಳಿಯ 27ನೇ ವರ್ಷದ ಗಣೇಶೋತ್ಸವ-2025 ಅಂಗವಾಗಿ ಸೆ. 02ರಂದು ಸಂಜೆ 07:00 ಕ್ಕೆ ಗಣೇಶನಿಗೆ ಪ್ರೀಯವಾದ “ಪಡಿ ಪೂಜೆ ಹಾಗೂ ಮಹಾ ಮಂಗಳಾರತಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪೂಜಾ ಕಾರ್ಯಕ್ರವನ್ನು ಶ್ರೀ ಸೋಮೇಶ್ವರ ದೇವಸ್ಥಾನದ ಅರ್ಚಕರಾದ ಕು. ಪ್ರದೀಪ ಹಿರೇಮಠ, ಕು. ರಾಚಯ್ಯ ಬಾಗಲಕೋಟಮಠ ಅವರ ನೇರವೆರಿಸಿಲಿದ್ದಾರೆ ಜೊತೆಗೆ ಈ ಧಾರ್ಮಿಕ ಕಾರ್ಯಕ್ಕೆ ಶ್ರೀ ಸೋಮೇಶ್ವರ ಸೇವಾ ಸಮಿತಿ ಸಹಕಾರ ನೀಡಲಿದೆ. ಕಾರಣ ಅವಳಿ ನಗರದ ಸಕಲ ಸಬ್ಧಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಮಂಡಳಿ ಅಧ್ಯಕ್ಷ ರಾಜು ರೊಟ್ಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.