ಯುದ್ದ ವಿರೋಧಿಸಿ ವಿಶ್ವ ಶಾಂತಿಗಾಗಿ ಹಾರೈಸಿ
Oppose war and wish for world peace
ಲೋಕದರ್ಶನ ವರದಿ
ದಾಂಡೇಲಿ - ಮಾ. 13: ದಾಂಡೇಲಿಯ ಸೋಮಾನಿ ಸರ್ಕಲ್ನಲ್ಲಿ ಗುರುವಾರ ಸಂಜೆ ಯುದ್ದ ವಿರೋಧಿಸಿ ವಿಶ್ವ ಶಾಂತಿಗಾಗಿ ಹಾರೈಸಿ, ಯುದ್ದದಲ್ಲಿ ಮಡಿದವರಿಗೆ ದೀಪಗಳೊಂದಿಗೆ ಸಂತಾಪ ಸೂಚಿಸಿ ಸಿಐಟಿಯೂದಿಂದ ಸಭೆ ನಡೆಸಲಾಯಿತು. ಸಿಐಟಿಯೂ ಜಿಲ್ಲಾ ಉಪಾಧ್ಯಕ್ಷೆ ಯಮುನಾ ಗಾಂವಕರ್, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್ ಮಾತನಾಡಿ ಪಾಶ್ಚಾತ್ಯ ರಾಷ್ಟ್ರಗಳ ನಡುವೆ ನಡೆದಿರುವ ಯುದ್ದ ಸಾವಿರಾರು ಜನರ ಬಲಿ ತೆಗೆದುಕೊಳ್ಳುವ ಸರ್ವಾಧಿಕಾರಿ ಧೋರಣೆಯಾಗಿದೆ. ಯುದ್ದ ನಿಲ್ಲಿಸಿ ಶಾಂತಿ ಸ್ಥಾಪನೆಯಾಗಲಿ ಬೆಲೆ ಎರಿಕೆ ತಡೆಗಟ್ಟಿ ಸಾಮ್ರಾಜ್ಯ ಶಾಹಿಗೆ ಮಣೆ ಹಾಕುವ ಭಾರತದ ನೀತಿ ಹಿಮ್ಮೆಟ್ಟಿಸಿ ಎಂದರು. ಸಭೆಯಲ್ಲಿ ಡಿ.ವಾಯ್.ಎಪ್.ಐ ತಾಲೂಕಾ ಕಾರ್ಯದರ್ಶಿ ಇಮ್ರಾನ್, ಮುಖಂಡರಾದ ಕಾಂತರಾಜ್, ವಿಜಯ ಹರಿಜನ, ತಾಲ್ಮನ್ ಹಿಲ್ಲೂರಿ, ಇಷಾದ್ ಬೇಲೂರ್ ಜಾಫರ್ ಮಾಸನಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 