ಯುದ್ದ ವಿರೋಧಿಸಿ ವಿಶ್ವ ಶಾಂತಿಗಾಗಿ ಹಾರೈಸಿ
Oppose war and wish for world peace
ಲೋಕದರ್ಶನ ವರದಿ
ದಾಂಡೇಲಿ - ಮಾ. 13: ದಾಂಡೇಲಿಯ ಸೋಮಾನಿ ಸರ್ಕಲ್ನಲ್ಲಿ ಗುರುವಾರ ಸಂಜೆ ಯುದ್ದ ವಿರೋಧಿಸಿ ವಿಶ್ವ ಶಾಂತಿಗಾಗಿ ಹಾರೈಸಿ, ಯುದ್ದದಲ್ಲಿ ಮಡಿದವರಿಗೆ ದೀಪಗಳೊಂದಿಗೆ ಸಂತಾಪ ಸೂಚಿಸಿ ಸಿಐಟಿಯೂದಿಂದ ಸಭೆ ನಡೆಸಲಾಯಿತು. ಸಿಐಟಿಯೂ ಜಿಲ್ಲಾ ಉಪಾಧ್ಯಕ್ಷೆ ಯಮುನಾ ಗಾಂವಕರ್, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್ ಮಾತನಾಡಿ ಪಾಶ್ಚಾತ್ಯ ರಾಷ್ಟ್ರಗಳ ನಡುವೆ ನಡೆದಿರುವ ಯುದ್ದ ಸಾವಿರಾರು ಜನರ ಬಲಿ ತೆಗೆದುಕೊಳ್ಳುವ ಸರ್ವಾಧಿಕಾರಿ ಧೋರಣೆಯಾಗಿದೆ. ಯುದ್ದ ನಿಲ್ಲಿಸಿ ಶಾಂತಿ ಸ್ಥಾಪನೆಯಾಗಲಿ ಬೆಲೆ ಎರಿಕೆ ತಡೆಗಟ್ಟಿ ಸಾಮ್ರಾಜ್ಯ ಶಾಹಿಗೆ ಮಣೆ ಹಾಕುವ ಭಾರತದ ನೀತಿ ಹಿಮ್ಮೆಟ್ಟಿಸಿ ಎಂದರು. ಸಭೆಯಲ್ಲಿ ಡಿ.ವಾಯ್.ಎಪ್.ಐ ತಾಲೂಕಾ ಕಾರ್ಯದರ್ಶಿ ಇಮ್ರಾನ್, ಮುಖಂಡರಾದ ಕಾಂತರಾಜ್, ವಿಜಯ ಹರಿಜನ, ತಾಲ್ಮನ್ ಹಿಲ್ಲೂರಿ, ಇಷಾದ್ ಬೇಲೂರ್ ಜಾಫರ್ ಮಾಸನಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 