ಕುಸ್ತಿ ಪಟುಗಳ ತವರೂರಲ್ಲಿ ನಾಳೆ ಬಯಲು ಜಂಗಿ ಕುಸ್ತಿ

ಕುಸ್ತಿ ಪಟುಗಳ ತವರೂರಲ್ಲಿ ನಾಳೆ ಬಯಲು ಜಂಗಿ ಕುಸ್ತಿ Open-air wrestling tomorrow in the hometown of wrestlers

 

ರಾಣೆಬೆನ್ನೂರ 06: ನಗರ ದೇವತೆಗಳಾದ ಶ್ರೀ ಗಂಗಾಜಲ ಹಾಗೂ ತುಂಗಾಜಲ ಚೌಡೇಶ್ವರಿ ದೇವಿಯ ಯಾತ್ರೋತ್ಸವದ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹಾ ನಾಳೆ ಜನವರಿ 8, 2026 ರಿಂದ ಜನವರಿ 10 ರವರೆಗೆ 3 ದಿವಸಗಳ ಕಾಲ ಬಾರಿ ಜಂಗಿ ಬಯಲು ಕುಸ್ತಿ ಆಯೋಜಿಸಿದೆ. 

ಸ್ಥಳೀಯ ಬೀರಲಿಂಗೇಶ್ವರ ಗರಡಿಮನಿ  ನಾಲ್ಕನೇ ಬಾರಿಗೆ ಕುಸ್ತಿ ಸ್ಪರ್ಧೆ ರೂಪಿಸಿದ್ದು, ಪ್ರತಿದಿನ  ಸಂಜೆ 8 ಗಂಟೆಗೆ ಕುಸ್ತಿ ಪಂದ್ಯವು ನಗರಸಭೆ ಕ್ರೀಡಾಂಗಣದಲ್ಲಿ ಬಯಲು ಜಂಗಿ ಕುಸ್ತಿಗಳನ್ನು ಏರಿ​‍್ಡಸಲಾಗಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.  ಕೊನೆಯ ದಿನ ಕುಸ್ತಿಯಲ್ಲಿ ಜಯಗಳಿಸಿದವರಿಗೆ ಒಂದು ಕೆಜಿ ಬೆಳ್ಳಿ ಗಧೆ ಬಹುಮಾನವಾಗಿ ನೀಡಲಾಗುವುದು.  ಕುಸ್ತಿ ಕ್ರೀಡಾಪಟುಗಳಿಗೆ ಊಟದ  ವ್ಯವಸ್ಥೆ ಇದೆ ಎಂದು ಗರಡಿಮನಿಯ ಅಧ್ಯಕ್ಷ ಭರಮಪ್ಪ ಪೂಜಾರ ಸಹ ಕಾರ್ಯದರ್ಶಿ ಆನಂದ ಹುಲಬನ್ನಿ ತಿಳಿಸಿದ್ದಾರೆ.