ಎಲ್ಐಸಿ ಸಿಬ್ಬಂದಿಯಿಂದ ಒಂದು ದಿನದ ಸಾರ್ವತ್ರಿಕ ಮುಷ್ಕರ
One day general strike by LIC staff
ಕೊಪ್ಪಳ 09: ಎಲ್ಐಸಿ ಸಿಬ್ಬಂದಿಯವರಿಂದ ನಗರದ ಎಲ್ಐಸಿ ಕಛೇರಿ ಮುಂಭಾಗದಲ್ಲಿ ಒಂದು ದಿನದ ಸಾರ್ವತ್ರಿಕ ಮುಷ್ಕರವನ್ನು ಮಾಡಲಾಯಿತು. ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಭೃಂಗಿ ವಿಮಾ ಉದ್ದಿಮೆಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಕೇಂದ್ರ ಸರಕಾರ ವಿಮಾ ಉದ್ದಿಮೆಯಲ್ಲಿ ವಿದೇಶೀ ನೇರ ಬಂಡವಾಳ ಹೆಚ್ಚು ಮಾಡುತ್ತಿರುವದರ ವಿರುದ್ಧ ಮಾತನಾಡುತ್ತಾ ಎಲ್ ಐ ಸಿ ಯಲ್ಲಿ ವರ್ಗ, 3 ಮತ್ತು 4 ನೇಮಕಾತಿಗಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಲ್ ಯ ಸಿ ಯ ಪ್ರೀಮಿಯಮ್ ಮೇಲಿನ ಜಿಎಸ್ಟಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘದ ಕೊಪ್ಪಳದ ಅಧ್ಯಕ್ಷರಾದ ಶೇಖರ್ಪ, ಸದಸ್ಯರಾದ ರಮೇಶ, ಶ್ರೀಕಾಂತ, ಸಿದ್ದಪ್ಪ, ಸಾಗರ್, ವಂಶಿಕೃಷ್ಣ, ಜಗದೀಶ, ಚಂದ್ರಶೇಖರ, ಶ್ರೀಪಾದ, ವಿಜಯಕುಮಾರ, ಅನಂತರೆಡ್ಡಿ, ವಿನಯ, ಲಕ್ಷ್ಮಯ್ಯ, ಚಂದನ್ , ಸುಧಾಬಾಯಿ, ಸುಕನ್ಯಾ, ಮಹಾಲಕ್ಷ್ಮಿ, ಭಾರತಿ, ಪುಷ್ಪಾವತಿ, ಶಿರಿಶಾ, ಇಂದುಶ್ರೀ ಹಾಜರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 