ಇದು ರಸ್ತೆನಾ ಚರಂಡಿನಾ ನೋಡಿ ಅಧಿಕಾರಿಗಳೇ
Officials, check if this is a road or a drain.
ಲಕ್ಷ್ಮೇಶ್ವರ 09: ‘ರಸ್ತೆನಾ ಚರಂಡಿನಾ’ ಪಟ್ಟಣದ ಅಂಬೇಡ್ಕರ್ ಕಾಲೋನಿ ಒಂದರಲ್ಲಿ ಕಂಡುಬರುವ ದುಸ್ಥಿತಿ. ತಾತ್ಕಾಲಿಕ ಚರಂಡಿ ನಿರ್ಮಿಸಿದ್ದರೂ, ರಸ್ತೆಯಲ್ಲಿಯೇ ಮನೆಗೆ ಬಳಕೆ ಮಾಡಿದ ಗಲೀಜು ನೀರು ಹರಿದು ಹೋಗುತ್ತಿದ್ದು, ಅದೇ ಗಲೀಜು ನೀರು ದಾಟುತ್ತಾ ಜನರು ಮನೆಗಳಿಗೆ ಹೋಗುತ್ತಿದ್ದಾರೆ. ನೋಡಿ ವೃದ್ಧರು ಮಕ್ಕಳು ಸ್ವಲ್ಪ ಯಾಮಾರಿದ್ರೆ ಸಾಕು ಗಲೀಜ್ ನೀರು ಹರಿಯುವ ಚರಂಡಿಯಲ್ಲಿ ಬೀಳುವುದು ಪಕ್ಕಾ. ಅದಕ್ಕಾಗಿ ಪುರಸಭೆ ಅಧಿಕಾರಿಗಳು ಒಮ್ಮೆ ಈ ಬಡಾವಣೆಗೆ ಭೇಟಿ ನೀಡಿ ಇಲ್ಲಿರುವ ಸಮಸ್ಯೆಯನ್ನು ಆಲಿಸಿ ಮನೆಗೆ ಬಳಕೆ ಮಾಡಿದ ಗಲೀಜು ನೀರು ಹರಿದು ಹೋಗಲು ಪೈಪ್ ಲೈನ್ ಒಳಗಡೆ ಅಳವಡಿಸಿ ಮೇಲೆ ರಸ್ತೆ ಮಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ಅಲ್ಲಿಯ ನಿವಾಸಿಗಳಾದ ರಾಮಪ್ಪ ಅಡಿಗಿಮನಿ, ದೇವೇಂದ್ರ್ಪ ಕರಬಸಣ್ಣವರ, ಸೋಮಪ್ಪ ಸಂದಿಮನಿ, ಬಸಪ್ಪ ಸಂದಿಮನಿ, ಮಹಾಂತೇಶ್ ಕರಬಸಣ್ಣನವರ, ಬಸಪ್ಪ ಮುಂಡಗೋಡ, ಗಂಗವ್ವ ಕರಿಬಸಣ್ಣವರ ಅವರು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 