ಇದು ರಸ್ತೆನಾ ಚರಂಡಿನಾ ನೋಡಿ ಅಧಿಕಾರಿಗಳೇ
Officials, check if this is a road or a drain.
ಲಕ್ಷ್ಮೇಶ್ವರ 09: ‘ರಸ್ತೆನಾ ಚರಂಡಿನಾ’ ಪಟ್ಟಣದ ಅಂಬೇಡ್ಕರ್ ಕಾಲೋನಿ ಒಂದರಲ್ಲಿ ಕಂಡುಬರುವ ದುಸ್ಥಿತಿ. ತಾತ್ಕಾಲಿಕ ಚರಂಡಿ ನಿರ್ಮಿಸಿದ್ದರೂ, ರಸ್ತೆಯಲ್ಲಿಯೇ ಮನೆಗೆ ಬಳಕೆ ಮಾಡಿದ ಗಲೀಜು ನೀರು ಹರಿದು ಹೋಗುತ್ತಿದ್ದು, ಅದೇ ಗಲೀಜು ನೀರು ದಾಟುತ್ತಾ ಜನರು ಮನೆಗಳಿಗೆ ಹೋಗುತ್ತಿದ್ದಾರೆ. ನೋಡಿ ವೃದ್ಧರು ಮಕ್ಕಳು ಸ್ವಲ್ಪ ಯಾಮಾರಿದ್ರೆ ಸಾಕು ಗಲೀಜ್ ನೀರು ಹರಿಯುವ ಚರಂಡಿಯಲ್ಲಿ ಬೀಳುವುದು ಪಕ್ಕಾ. ಅದಕ್ಕಾಗಿ ಪುರಸಭೆ ಅಧಿಕಾರಿಗಳು ಒಮ್ಮೆ ಈ ಬಡಾವಣೆಗೆ ಭೇಟಿ ನೀಡಿ ಇಲ್ಲಿರುವ ಸಮಸ್ಯೆಯನ್ನು ಆಲಿಸಿ ಮನೆಗೆ ಬಳಕೆ ಮಾಡಿದ ಗಲೀಜು ನೀರು ಹರಿದು ಹೋಗಲು ಪೈಪ್ ಲೈನ್ ಒಳಗಡೆ ಅಳವಡಿಸಿ ಮೇಲೆ ರಸ್ತೆ ಮಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ಅಲ್ಲಿಯ ನಿವಾಸಿಗಳಾದ ರಾಮಪ್ಪ ಅಡಿಗಿಮನಿ, ದೇವೇಂದ್ರ್ಪ ಕರಬಸಣ್ಣವರ, ಸೋಮಪ್ಪ ಸಂದಿಮನಿ, ಬಸಪ್ಪ ಸಂದಿಮನಿ, ಮಹಾಂತೇಶ್ ಕರಬಸಣ್ಣನವರ, ಬಸಪ್ಪ ಮುಂಡಗೋಡ, ಗಂಗವ್ವ ಕರಿಬಸಣ್ಣವರ ಅವರು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 