ಶಿಕ್ಷಕರ ಸ್ಥಾನವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ: ಆಕಾಂಕ್ಷಾ ಸೈನಿ

ಶಿಕ್ಷಕರ ಸ್ಥಾನವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ: ಆಕಾಂಕ್ಷಾ ಸೈನಿ  No one can replace the position of a teacher: Akanksha Saini

ಲೋಕದರ್ಶನ ವರದಿ 

ಬೆಳಗಾವಿ 09: "ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಜಾಗೃತಗೊಳಿಸಿ, ಅವರನ್ನು ಸ್ವತಂತ್ರವಾಗಿ ಕಲಿಯುವಂತೆ ಸಜ್ಜುಗೊಳಿಸುವುದು ಶಿಕ್ಷಕರ ಕರ್ತವ್ಯ. ಈ ಕೃತಕ ಬುದ್ಧಿಮತ್ತೆಯ ಯುಗದಲ್ಲೂ ಶಿಕ್ಷಕರ ಸ್ಥಾನವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ" ಎಂದು ಐಐಟಿ ಬಾಂಬೆಯ ಸ್ಪೋಕನ್ ಟ್ಯುಟೋರಿಯಲ್ ರಾಷ್ಟ್ರೀಯ ಸಂಯೋಜಕಿ ಆಕಾಂಕ್ಷಾ ಸೈನಿ ಹೇಳಿದರು.   

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗ ಮತ್ತು ವಿಶ್ವವಿದ್ಯಾಲಯದ ಗ್ರಂಥಾಲಯದ ಸಂಯೋಜನೆಯ ಅಡಿಯಲ್ಲಿ, PM-UShA(MERU)  ಯೋಜನೆಯಡಿ ಐಐಟಿ ಬಾಂಬೆ(IIT Bombay) ಸಹಯೋಗದೊಂದಿಗೆ ‘ಸ್ಪೋಕನ್ ಟ್ಯುಟೋರಿಯಲ್‌’ (Spoken Tutorial) ಕೋರ್ಸ್‌ಗಳ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಎಂ.ಒ.ಯು (MoU)  ದಾಖಲೆ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.    

ಐಸಿಟಿ (ಋಖಿ) ಚಾಲಿತ ಕಲಿಕೆಯ ಮೂಲಕ ಭವಿಷ್ಯದ ಸಿದ್ಧತೆಯ ಸಬಲೀಕರಣ ಎಂಬ ವಿಷಯದ ಮೇಲೆ ಮಾತನಾಡಿದ ಅವರು, "ಸ್ಪೋಕನ್ ಟ್ಯುಟೋರಿಯಲ್ (Spoken Tutorial)  ವೇದಿಕೆಯ ಮೂಲಕ ಎಲ್ಲಾ 22 ಭಾರತೀಯ ಭಾಷೆಗಳಲ್ಲಿ ಸಕ್ರಿಯ ಕಲಿಕಾ ವಿಧಾನವನ್ನು ಒದಗಿಸಲಾಗುತ್ತಿದೆ. ಇದು ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಜ್ಞಾನದೊಂದಿಗೆ ಮೌಲ್ಯಯುತವಾದ ಪ್ರಮಾಣಪತ್ರಗಳನ್ನು ನೀಡುತ್ತದೆ. ವಿದ್ಯಾರ್ಥಿಗಳಲ್ಲದೆ ಅಧ್ಯಾಪಕರಿಗೂ ಸಹಕಾರಿಯಾಗಿರುವ ಈ ಯೋಜನೆಯು, ಈಗಾಗಲೇ ದೇಶದಾದ್ಯಂತ  6000ಕ್ಕೂ ಹೆಚ್ಚು ಕಾಲೇಜುಗಳ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳನ್ನು  ತಲುಪಿದೆ.   

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜ್ಞಾನ ವಿಭಾಗದ ಡೀನ್, ವಿಶ್ವನಾಥ್ ಆವಟೆ ಮಾತನಾಡಿ,  "ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಪೋಕನ್ ಟ್ಯುಟೋರಿಯಲ್ ಜೊತೆಗಿನ ಈ ಸಹಭಾಗಿತ್ವವು ಶೈಕ್ಷಣಿಕ ನಾವೀನ್ಯತೆ ಮತ್ತು ಡಿಜಿಟಲ್ ಸಬಲೀಕರಣಕ್ಕೆ ಹೊಸ ವೇಗ ನೀಡಲಿದೆ. ಇದು ನಿರಂತರ ಕಲಿಕೆ ಹಾಗೂ ಹೊಸತನದ ಸಂಸ್ಕೃತಿಯನ್ನು ಬೆಳೆಸುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ ಮತ್ತು ಪ್ರಾಯೋಗಿಕ ಜ್ಞಾನವನ್ನು ವೃದ್ಧಿಸುತ್ತದೆ." ಎಂದು ಹೇಳಿದರು.    

ಆರಿ​‍್ಸಯು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ. ಕಿರಣ್ ಪಿ. ಸವಣೂರ್ ಅವರು ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸುವ ಮೂಲಕ ಮತ್ತು ಸಮಕಾಲೀನ ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಸ್ಪೋಕನ್ ಟ್ಯುಟೋರಿಯಲ್‌ನ ಈಓಖಖ ಕೋರ್ಸ್‌ಗಳ ಹೆಚ್ಚುತ್ತಿರುವ ಪ್ರಸ್ತುತತೆಯನ್ನು ಒತ್ತಿ ಹೇಳುವ ಮೂಲಕ ಕಾರ್ಯಕ್ರಮದ ಧಾಟಿಯನ್ನು ರೂಪಿಸಿದರು ಮತ್ತು ಸಭೆಯನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಆರ್‌. ಎಮ್‌. ದೇವರೆಡ್ಡಿ, ಕಒ-ಗಖಊಂ ನೋಡಲ್ ಅಧಿಕಾರಿ ಡಾ. ನಂದಿನಿ ದೇವರಮನಿ, ಸಹಾಯಕ ಪ್ರಾಧ್ಯಾಪಕಿ, ಮಲ್ಲಮ್ಮ ರೆಡ್ಡಿ,  ಸಹಾಯಕ ಪ್ರಾಧ್ಯಾಪಕ ಡಾ. ರಮೇಶ್ ಕುರಿ ಸೇರಿದಂತೆ ಪ್ರಾಧ್ಯಾಪಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. 


Belgavi