ಕಬ್ಬು ಕಳಿಸಲು ಅವಸರ ಬೇಡ : ರಾಜು ಗಡ್ಡನವರ್
No need to rush to send sugarcane: Raju Gaddanavar
ಯಮಕನಮರಡಿ, 11 : ಸಮೀಪದ ಹತ್ತರಗಿ ಕಾರಿಮಠದಲ್ಲಿ ಸೋಮವಾರ ದಿನಾಂಕ10 ರಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದ ಕಬ್ಬು ಬೆಳೆಗಾರರ ರೈತರ ಸಭೆಯು ನಡೆಯಿತು ಸಭೆಯಲ್ಲಿ ರೈತರ ಮುಖಂಡ ರಾಜು ಗಡ್ಡನವರ್ ಸಕ್ಕರೆ ಕಾರ್ಖಾನೆ ಮಾಲೀಕರ ಕುರಿತು ಮಾತನಾಡುತ್ತಾ ಮನವಿ ಮಾಡಿದರು.
ಸಭೆಯ ದಿವ್ಯ ಸಾನಿಧ್ಯ ವಹಿಸಿದ ಹತ್ತರಗಿ ಕಾರಿ ಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ರೈತರ ಹಿತಕ್ಕಾಗಿ ಬರುವ 14 ಅಥವಾ 15ರಂದು ಗಡಹಿಂಗ್ಲಜ್ ತಾಲೂಕಿನ ನೆಸರಿಯಲ್ಲಿ ಬೃಹತ್ ರೈತರ ಮೇಳ ಮತ್ತು ರ್ಯಾಲಿ ನಡೆಯಲಿದ್ದು ಕರ್ನಾಟಕ ಗಡಿಭಾಗದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಗಿಂತ ಹೆಚ್ಚಿನ ದರ ಸಿಗಬೇಕೆಂಬ ನಿಟ್ಟಿನಲ್ಲಿ ಈ ಮೇಳದ ಆಯೋಜಿಸಲಾಗುವುದು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಂದ ಹೆಚ್ಚಿನ ದರ ಸಿಗುತ್ತಿರುವುದರಿಂದ ಕಬ್ಬು ಬೆಳೆಗಾರರು ತಮ್ಮ ಕಬ್ಬು ನಿರ್ವಹಿಸುತ್ತಿದ್ದಾರೆ ಐದು ದಿನಗಳ ಮೆಟ್ಟಿಗೆ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸಿಕೊಡಬಾರದು ಎಂಬುವುದೇ ಮಹಾರಾಷ್ಟ್ರದ ಗಡಿ ಭಾಗದ ರೈತರ ಸಂಘಟನೆಯು ನಿಲುವಾಗಿದೆ ಮಹಾರಾಷ್ಟ್ರ ಭಾಗದಲ್ಲಿ ರಿಕವರಿ ಹೆಚ್ಚಿದ್ದು ಇಳುವರಿ ಇಲ್ಲ ಕರ್ನಾಟಕ ಭಾಗದಲ್ಲಿ ಇಳುವರಿ ಹೆಚ್ಚಿದ್ದು ರಿಕವರಿ ಇಲ್ಲ ಎಂದು ಶ್ರೀ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವ ಪ್ರಭಾ ವಂಟುಮೂರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಹಾಲ್ ಮರಬಸ್ಸಣ್ಣವರ ರಾಜ್ಯ ಉಪಾಧ್ಯಕ್ಷ ವಂಟುಮುರಿ ಬೀಮ್ ಗೌಡ ಪಾಟೀಲ್ ರವಿ ಪಾಟೀಲ್ ಪ್ರಜ್ವಲ್ ಪಾಟೀಲ್ ಶ್ರೀಶೈಲ್ ಜೋಶ್ ಸಚಿನ್ ಈರಣ್ಣ ಕೇದನೂರಿ ರಾಜು ಮುತ್ನಾಳಿ ಮತ್ತು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ರೈತರ ಸಂಘದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 