ಕರ್ನಾಟಕ ಮುಸ್ಲಿಂ ಯುನಿಟಿಗೆ ಜಿಲ್ಲಾ ವಕ್ತಾರ ನಜೀರ್ ಮುದಗಲ್ ನೇಮಕ
Nazir Mudgal appointed as district spokesperson for Karnataka Muslim Unity
ಕೊಪ್ಪಳ 18 : ಕರ್ನಾಟಕ ಮುಸ್ಲಿಂ ಯುನಿಟಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಯುನಿಟಿಯ ಜಿಲ್ಲಾ ವಕ್ತಾರ ರಾಗಿ ಸಮಾಜದ ಯುವ ನಾಯಕ ನಜೀರ್ ಅಹ್ಮದ್ ಮುದುಗಲ್ ನೇಮಕಗೊಂಡಿದ್ದಾರೆ ಕೊಪ್ಪಳನಗರದ ಪ್ರವಾಸಿ ಮಂದಿರ ದಲ್ಲಿ. ಕರ್ನಾಟಕ ಮುಸ್ಲಿಂ ಯುನಿಟಿ ( ರಿ) ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ. ಮೊಹಮ್ಮದ್ ಜೀಲಾನ ಕಿಲ್ಲೇದಾರರವರ ಅಧ್ಷತೆಯಲ್ಲಿ ಜಿಲ್ಲಾ ಸಮಿತಿಯ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಕರ್ನಾಟಕ ಮುಸ್ಲಿಂ ಯುನಿಟಿ ( ರಿ) ಕೊಪ್ಪಳ ಜಿಲ್ಲಾ ಸಮಿತಿಗೆ ವಕ್ತಾರರನ್ನಾಗಿ ನಜೀರ್ ಅಹ್ಮದ್ ಮುದಗಲ್ ರವರನ್ನು ಆಯ್ಕೆ ಮಾಡಲಾಯಿತು ,ಹಾಗೂ ಜಿಲ್ಲೆಯ ಎಲ್ಲಾ ತಾಲೂಕ ಸಮಿತಿಗಳನ್ನು ತ್ವರಿತವಾಗಿ ರಚನೆ ಮಾಡುವಂತೆ ಹಾಗೂ ಜಿಲ್ಲಾ ಮತ್ತು ತಾಲೂಕುಗಳ ಮಹಿಳಾ ಘಟಕ ಹಾಗೂ ಜಿಲ್ಲಾ ಮತ್ತು ಎಲ್ಲ ತಾಲೂಕುಗಳ ಯುವ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡುವಂತೆ ಸಭೆಯಲ್ಲಿ ತಿರ್ಮಾಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ. ಮೊಹಮ್ಮದ್ ಜೀಲಾನ ಕಿಲ್ಲೇದಾರ, ಜಿಲ್ಲಾ ಉಪಾಧ್ಯಕ್ಷರಾದ ಸೀರಾಜುದ್ದೀನ ಮನಿಯಾರ್ ಜಿಲ್ಲಾ ಕಾರ್ಯದರ್ಶಿಗಳಾದ ಮುಸ್ತಫಾ ಕುದರಿಮೋತಿ ಸದಸ್ಯರಾದ ಆಶಿಫ್ ಕರ್ಕಿಹಳ್ಳಿ. ಗಫಾರ್ ದಿಡ್ಡಿ ಮತ್ತು ಅಜೀಜ್ ಮಾನ್ವಿಕರ್, ಸೈಯದ್ ನಾಸೀರ್ ಹುಸೇನಿ ಕೊಪ್ಪಳ ತಾಲೂಕಾ ಅಧ್ಯಕರಾದ ಫಕ್ರುಸಾಬ್ ನದಾಫ್ ತಾಲೂಕಾ ಕಾರ್ಯದರ್ಶಿಯಾದ ಹಜರತ್ಅಲಿ ಮುಜಾವರ್ ಸಂಘಟನಾ ಕಾರ್ಯದರ್ಶಿಯಾದ ಖಾಸಿಂಸಾಬ ಹಲಗೇರಿ ಹಾಗೂ ಕಾರಟಗಿ ತಾಲೂಕ ಅಧ್ಯಕ್ಷರಾದ ಅಮರುಲ್ ಸಾಬ, ಮುಸ್ತಫಾ, ಚಾಂದಪಾಷಾ ಬಸಾಪುರ, ಮುಸ್ತಫಾ ಬಸಾಪುರ, ಸೀರಾಜ್ ಸಾಬ ತಳಕಲ್ಲ, ಲೇಬಗೇರಿ ಜಿಲ್ಲಾ ಪಂಚಾಯತ್ ಘಟಕದ ಅಧ್ಯಕ್ಷರಾದ ಬಾಷಾ ಹಿರೇಮನಿ, ಸಲೀಂ ಕೊತ್ವಾಲ್ ಇತರರು ಉಪಸ್ಥಿತರಿದ್ದು ಸಭೇಯನ್ನು ಯಶಸ್ವಿಗೋಳಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 