ನವರಾತ್ರಿ ಉತ್ಸವ: ವಿಶ್ವನಾಥ ಸಿ. ಬಿರಾದಾರಗೆ ಸನ್ಮಾನ

ನವರಾತ್ರಿ ಉತ್ಸವ: ವಿಶ್ವನಾಥ ಸಿ. ಬಿರಾದಾರಗೆ ಸನ್ಮಾನ Navaratri Festival: Felicitation to Vishwanath C. Biradar

ತಾಳಿಕೋಟಿ 30: ಪಟ್ಟಣದ ಎಸ್ ಕೆ ನಗರದಲ್ಲಿ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನ ಸಮಿತಿ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಶ್ರೀ ದೇವಿ ಮಹಾತ್ಮೆ ಮಹಾಪುರಾಣ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ "ಎಮಿನೆಂಟ್ ಇಂಜಿನಿಯರ್ ಅವಾರ್ಡ" ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ ಸಿ. ಬಿರಾದಾರ ಎಇಇ ಇವರನ್ನು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ರೆಡ್ಡಿ ಇವರು ಸನ್ಮಾನಿಸಿ ಗೌರವಿಸಿದರು.  

ಪೂಜ್ಯ ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಸಿದ್ದರಾಮ ಶಿವಾಚಾರ್ಯರು, ಕಾಶಿಬಾಯಿ ಅಮ್ಮನವರು, ಪುರಾಣಿಕ ರಾಮಣ್ಣ ಪತ್ತಾರ, ಸಮಿತಿಯ ಸದಸ್ಯ ಸಂಗನಗೌಡ ಗಬಸಾವಳಗಿ ಇದ್ದರು.