ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ National Naturopathy Day

ಕಂಪ್ಲಿ 25: ಪಟ್ಟಣದ ಇಂದಿರ ನಗರದ ರಮದ್ ಬಿಯವರ ಮನೆಯ ಮೇಲೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟಿನ ಭಾರತಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳೆಯರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ ಇವರಿಂದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಪ್ರಕೃತಿ ಚಿಕಿತ್ಸೆಯ ಬಗ್ಗೆ ಜಾಗೃತಿ ಹಾಗೂ ಅದರ ಪ್ರಾಮುಖ್ಯತೆಯನ್ನು ತಿಳಿಸಲು ವಿಶೇಷ ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. 

ಸಂಸ್ಥೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಎಂ.ಬಿ.ರೇಖಾ ಮಾತನಾಡಿ, ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲೆಗಳ 236 ತಾಲ್ಲೂಕುಗಳಲ್ಲಿ ಉಚಿತ ಶಿಬಿರವನ್ನು ಏರಿ​‍್ಡಸಿ ಮಹಿಳೆಯರಿಗೆ ಮನೆಯಲ್ಲಿ ನ್ಯಾಚುರಲ್ ಉಪಯುಕ್ತವಾಗುವ ಆರೋಗ್ಯ ಸಲಹೆಗಳ ಮಾಹಿತಿ ನೀಡಲಾಗುತ್ತಿದ ಎಂದರು. 

ವೈದ್ಯರುಗಳಾದ ಡಾ.ನಾಗಚೈತನ್ಯ, ಡಾ.ಪದ್ಮಶ್ರೀ, ಡಾ.ಕೊಟ್ರೇಶ್ ಹಿರೇಮಠ ಅವರು ಮಹಿಳೆಯರಿಗೆ ಅಗತ್ಯವಾದ ಆರೋಗ್ಯದ ಮಾಹಿತಿಗಳನ್ನು, ಮನೆ ಓಷಧಿಗಳ ಬಗ್ಗೆ ಮಾಹಿತಿ ನೀಡಿದರು. 

ಸಂಪನ್ಮೂಲಕ ವ್ಯಕ್ತಿಗಳಾದ ಬಡಿಗೇರ್ ಜಿಲಾನ್ ಸಾಬ್ ಮಹಿಳೆಯರಿಗಿರುವ ಸಾಮಾನ್ಯ ಹಕ್ಕುಗಳು, ಕಾನೂನುಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ಮಂಜುಳಾ, ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀಶೈಲ, ಕೇಂದ್ರದ ಸರ್ವ ಸದಸ್ಯರು ಭಾಗವಹಿಸಿದ್ದರು.