ಎನ್‌ಎಸ್‌ಎಸ್ ಸಂಸ್ಥಾಪನೆ ದಿನಾಚರಣೆ

ಎನ್‌ಎಸ್‌ಎಸ್ ಸಂಸ್ಥಾಪನೆ ದಿನಾಚರಣೆ NSS Foundation Day Celebration

ರಾಯಬಾಗ  27:  ಎನ್‌.ಎಸ್‌.ಎಸ್ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಸ್ವಯಂ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ಪತಂಜಲಿ ಯೋಗ ತರಬೇತಿದಾರ ಸಂಜಯ ಕುಸ್ತಿಗಾರ ಹೇಳಿದರು.

ಇತ್ತೀಚೆಗೆ ಪಟ್ಟಣದ ಎಸ್‌.ಪಿ.ಎಮ್ ಶಿಕ್ಷಣ ಸಂಸ್ಥೆಯ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮತ್ತು ಕಾನೂನು ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಸಂಸ್ಥಾಪನೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರಿಗೆ ಸ್ವಚ್ಛತೆ, ಯೋಗ, ಆರೋಗ್ಯ, ಶಿಕ್ಷಣ , ಮೂಢನಂಬಿಕೆ ಇತ್ಯಾದಿ ವಿಷಯಗಳ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  ಪ್ರೊ.ಎಂ ಐ ಬಡಿಗೇರ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. 

ಸಂಸ್ಥೆಯ ಕಾರ್ಯದರ್ಶಿ ಎಸ್ ಎಸ್ ಸಿಂಗಾಡಿ, ಪ್ರಾಚಾರ್ಯರಾದ ಪ್ರೊ. ಐ ಎಸ್ ಗೋಕಾಕ್, ಡಾ. ಆರ್ ಕೆ ಪಾಟೀಲ್, ಎಸ್ ಎಸ್ ಕುರ್ಬೇಟಿ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪಿ ಆರ್ ರಾಮತೀರ್ಥ, ಪ್ರೊ. ಬಿ ಎ ನಾಯಿಕ, ಪ್ರೊ. ಪ್ರಶಾಂತ್ ಸೌದತ್ತಿ ಹಾಗೂ ಎನ್‌.ಎಸ್‌.ಎಸ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದರು.