ನನ್ನದೆ ತಪ್ಪು ಕವನ ಸಂಕಲನ ಬಿಡುಗಡೆ ಸಮಾರಂಭ

ನನ್ನದೆ ತಪ್ಪು ಕವನ ಸಂಕಲನ ಬಿಡುಗಡೆ ಸಮಾರಂಭ My Mistake Poetry Collection Release Ceremony

ಲೋಕದರ್ಶನ ವರದಿ 

ಯಮಕನಮರಡಿ 15: ಗಡಿಭಾಗದ ಹುಕ್ಕೇರಿ ತಾಲ್ಲೂಕಿನ  ಸೊಲಾಪುರ ಗ್ರಾಮ ಪಂಚಾಯ್ತಿಯಲ್ಲಿ ವಿಶ್ವ ಕನ್ನಡಿಗ ಡಾ. ಕುಮಾರ ತಳವಾರ ವಿರಚಿತ "ನನ್ನದೆ ತಪ್ಪು " ಕವನಸಂಕಲನ ಬಿಡುಗಡೆ ಸಮಾರಂಭ ಜರುಗಿತು. ಇದೇ ಸಂದರ್ಭದಲ್ಲಿ ಹುಕ್ಕೇರಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅವಲಕ್ಕಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಸಾಪದ ಸದಸ್ಯರಾದ ಎ ಬಿ ನಾಯಿಕ,  ಕಾಡೇಶ ಬಸ್ತವಾಡೆ, ಖನ್ನಿನಾಯ್ಕಸರ್, ರೈತ ಸಂಘದ ಅಧ್ಯಕ್ಷ, ಶಿಂತ್ರೆ ಗ್ರಾಮದ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.   ಕಸಾಪ ಪರವಾಗಿ ಕವಿ ಕುಮಾರ ತಳವಾರ ಅವರನ್ನು ಸತ್ಕಾರಿಸಲಾಯಿತು.  ಈ ಸಮಾರಂಭದಲ್ಲಿ ಕುಮಾರ ಅವರಿಂದ ಎಸ್‌ಎಸ್‌ಎಲ್‌ಸಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗು ಅಗ್ನಿವೀರ ಸೈನಿಕರ ಪಾಲಕರನ್ನು ಗೌರವಿಸಿ ಸನ್ಮಾನಿಸಲಾಯಿತು.