ನಗರಸಭೆ ಅಧ್ಯಕ್ಷರಿಂದ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ

Municipal Council President performs puja for various works

ನಗರಸಭೆ ಅಧ್ಯಕ್ಷರಿಂದ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ 

ಹಾವೇರಿ 8: :ನಗರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದ್ದು,ಗುಣಾತ್ಮಕ ಕೆಲಸಕ್ಕೆ ಆಧ್ಯತೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷರಾದ ಶಶಿಕಲಾ ರಾಮು ಮಾಳಗಿ ಹೇಳಿದರು. 

       ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹಿಂಭಾಗದ ಮುರುಘರಾಜೇಂದ್ರ ನಗರದಲ್ಲಿ ಸಿಸಿ ಚರಂಡಿ ಹಾಗೂ ಡಾಂಬರ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

  ಮೂವತ್ತೊಂದನೇ ವಾರ್ಡಿನ ಜನತೆ ವಾರ್ಡಿನ ಸದಸ್ಯರಿಗೆ ಕೆಲಸಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ನಗರೋತ್ಥಾನ ಅನುದಾನದ ಅಡಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು. ನಗರಸಭೆ ವಾರ್ಡಿನ ಸದಸ್ಯೆ ಕವಿತಾ ಯಲವಿಗಿಮಠ ಮಾತನಾಡಿ 31ನೇ ವಾರ್ಡಿನ ಜನತೆ ರಸ್ತೆ ಗಟಾರುಗಳನ್ನು ಮಾಡಿಸುವಂತೆ ಕೇಳುತ್ತಿದ್ದರು. ವಾರ್ಡಿನ ಜನತೆಯ ಸಹಕಾರದಿಂದ ಮಾದರಿ ವಾರ್ಡ್‌ ಮಾಡಲು ಶ್ರಮಿಸುತ್ತೇನೆ ಎಂದರು. ವಾರ್ಡಿನ ಯುವ ಮುಖಂಡರಾದ ಪರಶುರಾಮ ಹರ್ಲಾಪುರ ಮಾತನಾಡಿ ವಾರ್ಡಿನಲ್ಲಿನ ಎಲ್ಲಾ ಜನತೆ ನಾವೆಲ್ಲರೂ ಅಭಿವೃದ್ಧಿಗೆ ಸದಾ ಸಹಕಾರ ನೀಡುತ್ತೇವೆ. ಉತ್ತಮ ಕೆಲಸಕ್ಕೆ ನಿಮ್ಮೊಂದಿಗೆ ಇರಲಿದ್ದೇವೆ ಎಂದರು. 

        ಈ ಸಂದರ್ಭದಲ್ಲಿ ಸಾವಿತ್ರವ್ವ ಕರಿದ್ಯಾಮಣ್ಣನವರ,ರಾಮಕ್ಕ ಕುಲಕರ್ಣಿ, ರಾಮು ಮಾಳಗಿ, ಅಡಿವೆಪ್ಪ ಯಲವಿಗಿಮಠ,ಮಂಜಪ್ಪ ಕರಿದ್ಯಾಮಣ್ಣನವರ, ನಾಗಪ್ಪ ಗೌಳಿ, ಪರಸಪ್ಪ ಕೆ, ಈರಣ್ಣ ಪಾವಲಿ, ಮೃತ್ಯುಂಜಯ ಮಠದ,ಪ್ರಾವೀಣ ಪಾಟೀಲ, ಕರಬಸಪ್ಪ ಅರಳಿ,ಶಬ್ಬಿರ​‍್ಪ ಮುಲ್ಕಿ,ಪ್ರವೀಣ ಅಂಗಡಿ, ಶಿವಣ್ಣ ಕೆ ಸೇರಿದಂತೆ ವಾರ್ಡಿನ ಯುವಕರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.