ಭಕ್ತಿಭಾವದಲ್ಲಿ ಮುಳುಗಿದ ಮುಂಡಗೋಡ ಹನುಮ ಜಯಂತಿ ವೈಭವ
Mundagoda, immersed in devotion, celebrates Hanuman Jayanti
ಲೋಕದರ್ಶನ ವರದಿ
ಮುಂಡಗೋಡ 03 : ಪಟ್ಟಣದಲ್ಲಿ ಹನುಮ ಜಯಂತಿ ಈ ಬಾರಿ ಅಪಾರ ಭಕ್ತಿಭಾವ ಮತ್ತು ಅದ್ಧೂರಿ ಸಂಭ್ರಮದೊಂದಿಗೆ ಆಚರಿಸಲಾಯಿತು. ಚೈತ್ರ ಮಾಸದ ಪೂರ್ಣಿಮೆಯ ಪವಿತ್ರ ದಿನದ ಅಂಗವಾಗಿ ಜಂಬಗಿ ದವಾಖಾನೆ ಸಮೀಪದ ಹನುಮಾನ್ ದೇವಸ್ಥಾನ ಭಕ್ತರಿಂದ ಕಿಕ್ಕಿರಿದು ತುಂಬಿತ್ತು.ಕಲಿಯುಗದ ಪ್ರತ್ಯಕ್ಷ ದೈವ ಎಂದು ನಂಬಲಾಗುವ ಹನುಮಂತನ ಆರಾಧನೆಗಾಗಿ ಭಕ್ತರು ಬೆಳಗ್ಗಿನಿಂದಲೇ ದೇವಸ್ಥಾನಕ್ಕೆ ಆಗಮಿಸಿ ಪೂಜೆಯಲ್ಲಿ ತೊಡಗಿಕೊಂಡರು.ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹನುಮಂತನ ಭಾವಚಿತ್ರಕ್ಕೆ ವಿಶೇಷ ಪುಷ್ಪಾರ್ಚನೆ ಮತ್ತು ಮಹಾಪೂಜೆ ನೆರವೇರಿಸಲಾಯಿತು. ಭಕ್ತರ ನಂಬಿಕೆಯಂತೆ, ಇಂದಿಗೂ ಭೂಮಿಯ ಮೇಲೆಯೇ ನೆಲೆಸಿರುವ ಹನುಮಂತನು ತಮ್ಮನ್ನು ಕಾಪಾಡುತ್ತಾನೆ ಎಂಬ ಭಾವನೆ ಕಾರ್ಯಕ್ರಮದ ವಾತಾವರಣವನ್ನು ಇನ್ನಷ್ಟು ಆಧ್ಯಾತ್ಮಿಕವಾಗಿಸಿತು.
ಪೂಜಾ ಕಾರ್ಯಕ್ರಮದ ಬಳಿಕ ಭಕ್ತರಿಗೆ ತಂಪಾದ ಮಜ್ಜಿಗೆ ಹಾಗೂ ಸಿಹಿ ಪ್ರಸಾದ ವಿತರಣೆ ಮಾಡಲಾಗಿದ್ದು, ಬೇಸಿಗೆಯ ತಾಪದಲ್ಲಿ ಇದು ವಿಶೇಷ ಆಕರ್ಷಣೆಯಾಯಿತು. ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರು ಸಹ ಭಕ್ತಿಭಾವದಿಂದ ಪ್ರಸಾದ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಜರಂಗದಳ ತಾಲೂಕ ಸಂಚಾಲಕ ಶಂಕರ ಲಮಾಣಿ, ವಿಶ್ವ ಹಿಂದೂ ಪರಿಷತ್ ಅಯ್ಯಪ್ಪ ಭಜಂತ್ರಿ,ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ್ ಪಾಟೀಲ್, ಪ್ರಕಾಶ್ ಬಡಿಗೇರ್, ಮಂಜುನಾಥ್ ಹೆಚ್ ಪಿ, ವಿಶ್ವನಾಥ್ ನಾಯರ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಶೇಖರ್ ಲಮಾಣಿ ಮಂಜುನಾಥ್, ಹರ್ಮಲ್ಕರ್ ವಿಶ್ವನಾಥ್ ಪವರ್ ಶೆಟ್ರು, ಹಾಗೂ ಬಸವರಾಜ್ ಓಶಿಮಠ, ಮಂಜುನಾಥ್ ಮತ್ತಿಗಟ್ಟಿ, ಸುರೇಶ್ ಕಲ್ಲೋಳ್ಳಿ, ಮಾರುತಿ ಲಮಾಣಿ, ರವಿ ಹಿರೇಮ, ಕಾರ್ಯಕರ್ತರು ಮತ್ತು ಹನುಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 