ಮಾತೃಭಾಷೆಯ ಶಿಕ್ಷಣ ಸುಲಭ: ಬಟಕುಕರ್ಿ
ಲೋಕದರ್ಶನವರದಿ
ಚಿಮ್ಮಡ; ಮಾತ್ರಭಾಷಾ ಮಾದ್ಯಮದಲ್ಲಿ ಶಿಕ್ಷಣ ಪಡೆಯುವುದು ಸುಲಭ ಹಾಗೂ ಅನುಕೂಲಕರವಾಗಿದ್ದು ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವಂತಾಗಬೇಕೆಂದು ಗ್ರಾಂ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುಕರ್ಿ ಹೇಳಿದರು.
ಗ್ರಾಮದ ಸರಕಾರಿ ಉದರ್ು ಕಿ.ಪ್ರಾ. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಎಸ್ಡಿಎಂಸಿ ಹಾಗೂ ಖಡ್ಡಾಯ ವಗರ್ಾವಣೆಯಲ್ಲಿ ನೂತನವಾಗಿ ಆಗಮಿಸಿದ ನೂತನ ಶಿಕ್ಷಕರ ಸ್ವಾಗತ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು ಈ ಉದರ್ು ಶಾಲೆಯ ಅಭಿವೃದ್ದಿಗೆ ಮುಸ್ಲಿಂ ಸಮಾಜದ ಯುವಕರು ಕಳೆದ ಎರಡು ವರ್ಷಗಳಿಂದ ಶತಪ್ರಯತ್ನದ ಫಲವಾಗಿ ಇಂದು ಮೂವರು ನೂತನ ಶಿಕ್ಷಕರನ್ನು ಶಾಲೆಗೆ ವಗರ್ಾಯಿಸಿದ್ದು ಹೆಚ್ಚು ಮಕ್ಕಳನ್ನು ಶಾಲೆಗೆ ಧಾಖಲು ಮಾಡುವ ಮೂಲಕ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದರು.
ಇನ್ನೋರ್ವ ಅಥಿತಿ ಪ್ರಭು ನೇಸೂರ, ಇಬ್ರಾಹಿಂ ಡಾಂಗೆ. ಮಾತನಾಡಿ ಶಾಲೆಯ ಆಭಿವೃದ್ದಿಗೆ ಶಾಲಾ ಸುಧಾರಣಾ ಸಮೀತಿಯ ಕಾರ್ಯ ಮಹತ್ವದ್ದಾಗಿದ್ದು ಶಿಕ್ಷಕರು, ಪಾಲಕರ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಮೂಲಕ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂದರು. ಪ್ರಾಸ್ತಾವಿಕವಾಗಿ ಸಲಹಾ ಸಮೀತಿಯ ಸದಸ್ಯ ಇಲಾಹಿ ಜಮಖಂಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಇಮಾಮ ಯಾದವಾಡ ವಹಿಸಿದ್ದರು. ಅಥಿತಿಗಳಾಗಿ ಅಂಜುಮನ್ ಸಮೀತಿಯ ಅಧ್ಯಕ್ಷ ಸಲೀಮ ಜಮಖಂಡಿ, ಪ್ರಮುಖರಾದ ಅಪ್ಪಾಲಾಲ ಬಿಜಾಪೂರ, ಮಹ್ಮದ ಯಾದವಾಡ, ರುಸ್ತುಂ ಮಾಲದಾರ, ದಸ್ತಗೀರ ಕೌಜಲಗಿ, ಅಮೀರಲಿ ಸಕರ್ಾವಸ, ಉಪಾದ್ಯಕ್ಷ ಅಸ್ಲಂ ಸರಕಾವಸ, ಶಿಕ್ಷಕರಾದ ಇಮ್ತಿಯಾಜ ಇನಾಮದಾರ, ಝೆಡ್.ಎಚ್. ಇಂಡಿಕರ, ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು. ಶಿಕ್ಷಕಿ ಇನಾಮದಾರ ಸ್ವಾಗತಿಸಿದರು. ಇಂಡಿಕರ ಎಚ್. ಕೆ. ಅಂಬಲೆ ನಿರೂಪಿಸಿದರು, ಎಸ.ಟಿ. ಹುನಶಾಳ ವಂದಿಸಿದರು
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 