ಮೋದಿಜೀ ಪ್ರಮಾಣ ವಚನ: ಬಿಜೆಪಿ ಕಾರ್ಯಕರ್ತರ ಸಂಭ್ರಮ
ಲೋಕದರ್ಶನವರದಿ
ರಾಣೇಬೆನ್ನೂರು30: ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಸವಿ ನೆನಪಿಗಾಗಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಮತ್ತು ನಗರದ ಎಲ್ಲ ವಾಡರ್್ಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು, ನಗರಸಭಾ ಸದಸ್ಯರು ಸಾಮೂಹಿಕವಾಗಿ ಗುರುವಾರ ಸಂಜೆ ಸಾರ್ವಜನಿಕವಾಗಿ ಬೊಂದೆ ಉಂಡೆಗಳನ್ನು ಮನೆ-ಮನೆಗೆ ತೆರಳಿ ಹಂಚಿದರು. ನಂತರ ಕುರಬಗೇರಿ ವೃತ್ತದಲ್ಲಿ ಸಾರ್ವಜನಿಕವಾಗಿ ಬೀರಂಜಿ, ಮುಳಗಾಯಿ ಎಣಗಾಯಿ ಪಲ್ಲೆ, ಖಡಕ್ ರೊಟ್ಟಿ, ಚಟ್ನಿ, ಅನ್ನ-ಸಾಂಬಾರು, ವಿತರಿಸಿ ಸಂಭ್ರಮಿಸಿದರು.
ಕಳೆದ ಎರಡು ದಿವಸಗಳಿಂದ ಕಾರ್ಯಕರ್ತರು ಉಂಡೆಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇಂದು 50 ಸಾವಿರಕ್ಕೂ ಹೆಚ್ಚು ಬೊಂದೆ ಉಂಡೆಗಳನ್ನು ವಾಡರ್್ಗಳಲ್ಲಿ ಸಂಚರಿಸಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪರಮೇಶ ಗೂಳಣ್ಣನವರ, ಚನ್ನಬಸಪ್ಪ ತೋಟಪ್ಪನವರ, ಪ್ರಕಾಶ ಬುರಡಿಕಟ್ಟಿ, ಸೋಮಶೇಖರ ಗೌಡಶಿವಣ್ಣನವರ, ತಿಪ್ಪೇಶ್ ಗೊಗ್ಗದ, ಮಂಜುನಾಥ ಶ್ಯಾಮನೂರ, ಕುಮಾರ ಪಾಟೀಲ, ಗದಿಗೆಪ್ಪ ಮಾಕನೂರ, ಶಿವಪ್ಪ ಬುರಡಿಕಟ್ಟಿ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 