ರೈತರ ಹೆಚ್ಚುವರಿ ಭೂ ಪರಿಹಾರದ ಕುರಿತು ಸಭೆ

ರೈತರ ಹೆಚ್ಚುವರಿ ಭೂ ಪರಿಹಾರದ ಕುರಿತು ಸಭೆ Meeting on additional land compensation for farmers

ರಾಣೇಬೆನ್ನೂರು 18 :  ಇಲ್ಲಿನ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ರೈತರ ಹೆಚ್ಚುವರಿ ಭೂ ಪರಿಹಾರದ ಕುರಿತು ಸಭೆ ನಡೆಯಿತು. ಹಾವೇರಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಪರಿಹಾರ ಕುರಿತು ಬಹು ಚರ್ಚೆ ನಡೆಯಿತು. ರೈತರು ಮತ್ತು ರೈತ ಸಂಘದವರು ಮಂಡಿಸಿದ ಪರಿಹಾರ ಬೇಡಿಕೆಗಳನ್ನು ಸೂಕ್ಷ್ಮವಾಗಿ ಆಲಿಸಿದ ಉಪವಿಭಾಗಾಧಿಕಾರಿಗಳು ಅತೀ ಶೀಘ್ರದಲ್ಲಿಯೇ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು , ಪರಿಹಾರ ಕುರಿತಂತೆ ಚರ್ಚಿಸಿ, ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  ಸಭೆಯಲ್ಲಿ ರೈತ ಮುಖಂಡರಾದ ಜಗದೀಶ್ ಕೆರೂಡಿ, ಚೆನ್ನಬಸಪ್ಪ ಗುಗ್ಗರಿ, ಸತೀಶ್ ಹೊಳಬಾಗಿಲು, ಇಕ್ಬಾಲ್ ಸಾಬ್ ರಾಣೇಬೆನ್ನೂರು, ಹನುಮಂತಪ್ಪ ಗೋಡೆಮ್ನನವರ್, ಹನುಮಂತಪ್ಪ ದೊಡ್ಮನಿ, ಗೋವಿಂದಪ್ಪ ಲಮಾಣಿ, ಜಯಪ್ಪ ಲಮಾಣಿ, ಹನುಮಂತ್ ದೊಡ್ಮನಿ, ಸಿದ್ದಪ್ಪ ಚಳಗೇರಿ, ಅಶೋಕ್ ಕೊಪ್ಪದ, ಸೇರಿದಂತೆ ಮತ್ತಿತರರು ಇದ್ದರು.