ಕಾಯಕ ಶರಣರ ಜಯಂತಿ ಕುರಿತು ಸಭೆ

ಕಾಯಕ ಶರಣರ ಜಯಂತಿ ಕುರಿತು ಸಭೆ Meeting on Kayak Sharan Jayanti


ಕಾರವಾರ, ಜ.23: ಫೆಬ್ರವರಿ 10 ರಂದು ನಡೆಯುವ ಜಿಲ್ಲಾ ಮಟ್ಟದ ಕಾಯಕ ಶರಣರ ಜಯಂತಿ ಕಾರ್ಯಕ್ರಮದ ರೂಪರೇಷೆ ಹಾಗೂ ಕಾರ್ಯಕ್ರಮ ಆಯೋಜನೆ ಕುರಿತು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು. 

ಸಭೆಯಲ್ಲಿ ನಗರಸಭೆಯ ಪೌರಯುಕ್ತ ಜಗದೀಶ್ ಹುಲಗಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ.ನಾಯ್ಕ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಜಿ.ಎನ್ ತಾಮ್ರಗೌರಿ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ವಿಠೋಬಾ ನಾಯ್ಕ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಬಿ.ಎನ್ ಸೂರ್ಯ ಪ್ರಕಾಶ, ಉದಯ ಬಶೆಟ್ಟಿ, ದೀಪಕ ಬಿ ಕುಡಾಳಕರ, ಸಚ್ಚಿದಾನಂದ ಬೋರಕರ ಮತ್ತಿತರರು ಇದ್ದರು.