ಸಾಮೂಹಿಕ ಇಷ್ಟಲಿಂಗ ಮಹಾಪೂಜೆ
Mass Ishtalinga Mahapuja
ನವರಾತ್ರಿ ಆಚರಣೆಯ ಅಂಗವಾಗಿ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರರಿಂದ
ಧಾರವಾಡ 29 : ವೀರಶೈವ ಧರ್ಮದ ಸಿದ್ಧಾಂತ ಪ್ರಣೀತವಾದ ಇಷ್ಟಲಿಂಗ ಪೂಜೆಯು ಒಂದು ಶ್ರೇಷ್ಠ ಮಹಾವ್ರತವಾಗಿದೆ ಎಂದು ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಉತ್ತರ್ರದೇಶದ ವಾರಾಣಾಸಿ ನಗರದ ತಮ್ಮ ಜ್ಞಾನ ಪೀಠದಲ್ಲಿ ಶರನ್ನವರಾತ್ರಿ ಆಚರಣೆಯ ಅಂಗವಾಗಿ ಸೋಮವಾರ 8ನೆಯ ದಿನದ ಶುಭಾಶೀರ್ವಾದ ಸಂದೇಶ ನೀಡಿ ಮಾತನಾಡುತ್ತಿದ್ದರು. ಪ್ರಕೃತಿಯ 84 ಲಕ್ಷ ಜೀವರಾಶಿಗಳಲ್ಲಿ ಕೊನೆಯ ಅವಸ್ಥೆ ಎಂದೇ ಪರಿಗಣಿತವಾಗಿರುವ ಮಾನವ ಜನ್ಮದಲ್ಲಿ ಮುಕ್ತಿಯನ್ನು ಸಂಪಾದಿಸಲು ಪೂರಕವಾದ ಶಿವಯೋಗಾನುಸಂಧಾನದ ಪ್ರಮುಖ ಸಾಧನಾಗಿ ಇಷ್ಟಲಿಂಗ ಪ್ರಾಪ್ತವಾಗಿದೆ ಎಂದರು. ಇಷ್ಟಲಿಂಗ ಪೂಜೆಯು ನಿತ್ಯವ್ರತ. ಇದನ್ನು ಶಿರೋವ್ರತ ಹಾಗೂ ಪಾಶುಪತ ವ್ರತ ಎಂದೂ ಸಂಬೋಧಿಸಲಾಗಿದೆ. ಇಷ್ಟಲಿಂಗ ಪೂಜಾನುಷ್ಠಾನವು ಎಲ್ಲ ವ್ರತಗಳಲ್ಲಿ ಶ್ರೇಷ್ಠವಾಗಿರುವುದರಿಂದ ಇದು ಶಿರೋವ್ರತ. ಈ ವ್ರತದ ಮೂಲಕ ಜೀವನು ಶಿವನಾಗುವುದರಿಂದ ಇದು ಪಾಶುಪತ ವ್ರತ. ಬ್ರಹ್ಮಚಾರಿಗಳು, ಗೃಹಸ್ಥರು, ವಾನಪ್ರಸ್ಥರು, ಸನ್ಯಾಸಿಗಳು, ಜೊತೆಗೆ ಯಾವುದೇ ಜಾತಿ-ಜನಾಂಗದ ಸ್ತ್ರೀ-ಪುರುಷರು ಈ ವ್ರತ ಮಾಡಬಹುದಾಗಿದೆ. ಆದಿಯಲ್ಲಿ ಸದಾಶಿವನಿಂದ ಶ್ರೀಜಗದ್ಗುರು ಪಂಚಾಚಾರ್ಯರಿಗೆ, ನಂತರದಲ್ಲಿ ಶ್ರೀಜಗದ್ಗುರು ಪಂಚಾಚಾರ್ಯರು ಸಮಸ್ತ ಮಾನವರ ಕಲ್ಯಾಣಕ್ಕಾಗಿ ಇಷ್ಟಲಿಂಗ ಪೂಜಾ ವ್ರತವನ್ನು ಬೋಧಿಸಿದ್ದು, ಮನುಷ್ಯನ ಪಾರ್ಥಿವ ಶರೀರದೊಂದಿಗೆ ಹಿಂಬಾಲಿಸುವ ವಿಶ್ವದ ಏಕೈಕ ವಸ್ತು ಮತ್ತು ಚೈತನ್ಯವೆಂದರೆ ಅದು ಇಷ್ಟಲಿಂಗ ಮಾತ್ರ ಎಂದೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾರ್ಮಿಕವಾಗಿ ನುಡಿದರು.
ಶರನ್ನವರಾತ್ರಿ ಅಂಗವಾಗಿ ಪ್ರಾತಃಕಾಲದಲ್ಲಿ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಮತ್ತು ಆದಿಶಕ್ತಿ ಮಾತೆಗೆ ವಿಶೇಷ ಕುಂಕುಮಾರ್ಚನೆ ಜರುಗಿದವು. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಗದಗ, ವಿಜಯಪೂರ ಜಿಲ್ಲೆಗಳ ಭಕ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 