ಮಾರಿಕಾಂಬಾ ದೇವಿ ಜಾತ್ರೆ: ಐದನೇ ಹೊರಬೀಡು ಕಾರ್ಯಕ್ರಮ
Marikamba Devi Fair: Fifth launch event
ಮುಂಡಗೋಡ 28: ಹಳೂರ ಓಣಿಯ ಮಾರಿಕಾಂಬಾ (ದ್ಯಾಮವ್ವ ದೇವಿ) ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಐದನೇ ಹಾಗೂ ಕೊನೆಯ ಹೊರಬೀಡು ಕಾರ್ಯಕ್ರಮ ಭಕ್ತಿಭಾವದೊಂದಿಗೆ ಆಚರಿಸಲಾಯಿತು. ದೇವಿಯ ಅಲಿಖಿತ ಆದೇಶದಂತೆ, ಊರಿನ ಜನರು ತಮ್ಮ ಮನೆ, ಮನಸ್ಸು ಮತ್ತು ಭಾವಗಳನ್ನು ದೇವಿಯ ಪಾದಗಳಿಗೆ ಅರ್ಿಸಿ ತಾತ್ಕಾಲಿಕವಾಗಿ ಊರನ್ನು ತೊರೆದ ದೃಶ್ಯವು ಮನಮುಟ್ಟುವಂತಿತ್ತು. ಭಕ್ತರು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂಬ ನಂಬಿಕೆಯೊಂದಿಗೆ ತಮ್ಮ ಹೊಲ, ಗದ್ದೆಗಳು, ಹಸಿರು ತೋಟಗಳು, ಟಿಬೆಟ್ ಕ್ಯಾಂಪ್ ಪ್ರದೇಶಗಳು, ಉದ್ಯಾನವನಗಳು ಮತ್ತು ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಹೊರಬೀಡು ಸಂಪ್ರದಾಯವನ್ನು ವಿಧಿವಿಧಾನಗಳೊಂದಿಗೆ ಪಾಲಿಸಿದರು. ಹೊರಬೀಡು ಆಚರಣೆ ನಡೆಯುವ ವೇಳೆ ಬೀದಿಗಳು ಸಂಪೂರ್ಣ ಖಾಲಿಯಾಗಿದ್ದು, ಊರಿನ ಓಣಿಗಳು ಮೌನಕ್ಕೆ ಶರಣಾಗಿ, ಮುಂಡಗೋಡ ಪಟ್ಟಣವು ದೇವಿಯ ಸ್ಮರಣೆಯಲ್ಲಿ ಲೀನವಾಗಿದೆ ಎಂಬ ಭಾವನೆ ಮೂಡಿತು. ಜನಜೀವನದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡು, ಭಯಭಕ್ತಿ ಮತ್ತು ಶ್ರದ್ಧೆಯ ವಾತಾವರಣವು ಊರಿನಲ್ಲೆ ಎಲ್ಲೆಡೆ ಒತ್ತುಗೊಂಡಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 