ಮಾರಿಕಾಂಬಾ ದೇವಿ ಜಾತ್ರೆ: ಐದನೇ ಹೊರಬೀಡು ಕಾರ್ಯಕ್ರಮ
Marikamba Devi Fair: Fifth launch event
ಮುಂಡಗೋಡ 28: ಹಳೂರ ಓಣಿಯ ಮಾರಿಕಾಂಬಾ (ದ್ಯಾಮವ್ವ ದೇವಿ) ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಐದನೇ ಹಾಗೂ ಕೊನೆಯ ಹೊರಬೀಡು ಕಾರ್ಯಕ್ರಮ ಭಕ್ತಿಭಾವದೊಂದಿಗೆ ಆಚರಿಸಲಾಯಿತು. ದೇವಿಯ ಅಲಿಖಿತ ಆದೇಶದಂತೆ, ಊರಿನ ಜನರು ತಮ್ಮ ಮನೆ, ಮನಸ್ಸು ಮತ್ತು ಭಾವಗಳನ್ನು ದೇವಿಯ ಪಾದಗಳಿಗೆ ಅರ್ಿಸಿ ತಾತ್ಕಾಲಿಕವಾಗಿ ಊರನ್ನು ತೊರೆದ ದೃಶ್ಯವು ಮನಮುಟ್ಟುವಂತಿತ್ತು. ಭಕ್ತರು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂಬ ನಂಬಿಕೆಯೊಂದಿಗೆ ತಮ್ಮ ಹೊಲ, ಗದ್ದೆಗಳು, ಹಸಿರು ತೋಟಗಳು, ಟಿಬೆಟ್ ಕ್ಯಾಂಪ್ ಪ್ರದೇಶಗಳು, ಉದ್ಯಾನವನಗಳು ಮತ್ತು ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಹೊರಬೀಡು ಸಂಪ್ರದಾಯವನ್ನು ವಿಧಿವಿಧಾನಗಳೊಂದಿಗೆ ಪಾಲಿಸಿದರು. ಹೊರಬೀಡು ಆಚರಣೆ ನಡೆಯುವ ವೇಳೆ ಬೀದಿಗಳು ಸಂಪೂರ್ಣ ಖಾಲಿಯಾಗಿದ್ದು, ಊರಿನ ಓಣಿಗಳು ಮೌನಕ್ಕೆ ಶರಣಾಗಿ, ಮುಂಡಗೋಡ ಪಟ್ಟಣವು ದೇವಿಯ ಸ್ಮರಣೆಯಲ್ಲಿ ಲೀನವಾಗಿದೆ ಎಂಬ ಭಾವನೆ ಮೂಡಿತು. ಜನಜೀವನದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡು, ಭಯಭಕ್ತಿ ಮತ್ತು ಶ್ರದ್ಧೆಯ ವಾತಾವರಣವು ಊರಿನಲ್ಲೆ ಎಲ್ಲೆಡೆ ಒತ್ತುಗೊಂಡಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 