ಬಿಜೆಪಿ- ಶಿವಸೇನೆ ಶೀಘ್ರ ಒಂದುಗೂಡಲಿವೆ ಎಂಬ ಮನೋಹರ್ ಜೋಷಿ ಹೇಳಿಕೆ, ನಿರಾಕರಿಸಿದ ಪಕ್ಷ
ಮುಂಬೈ, ಡಿ 11: ಬಿಜೆಪಿ ಹಾಗೂ ಶಿವಸೇನೆ ನಡುವೆ ಮರು ಮೈತ್ರಿ ಕುರಿತು ಪಕ್ಷದ ಹಿರಿಯ ನಾಯಕ ಮನೋಹರ್ ಜೋಷಿ ಅವರು ನೀಡಿರುವ ಹೇಳಿಕೆ ಶಿವಸೇನೆಯ ಅಧಿಕೃತ ನಿಲುವಲ್ಲ, ಅದು ಅವರ ವ್ಯಕ್ತಿಗತ ಹೇಳಿಕೆ ಎಂದು ಶಿವಸೇನೆ ಬುಧವಾರ ಸ್ಪಷ್ಟನೆ ನೀಡಿದೆ.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಪಕ್ಷದ ಹಿರಿಯ ನಾಯಕ ಮನೋಹರ್ ಜೋಷಿ, ಶೀಘ್ರದಲ್ಲಿಯೇ ಬಿಜೆಪಿ ಹಾಗೂ ಶಿವಸೇನೆ ಒಂದು ಗೂಡಲಿವೆ ಎಂದು ಮಂಗಳವಾರ ಹೇಳಿದ್ದರು.
ಈ ನಡುವೆ ಶಿವಸೇನೆ ಹಿರಿಯ ನಾಯಕ ನೀಲಂ ಗೋರೆ ಬುಧವಾರ ಹೇಳಿಕೆ ನೀಡಿ, ಶಿವಸೇನೆ ಮತ್ತು ಬಿಜೆಪಿ ಸದ್ಯದಲ್ಲೇ ಒಂದುಗೂಡಲಿವೆ ಎಂಬ ಹಿರಿಯ ನಾಯಕ ಮನೋಹರ್ ಜೋಷಿ ನೀಡಿರುವ ಹೇಳಿಕೆ ಅವರ ವ್ಯಕ್ತಿಗತವಾದ ಹೇಳಿಕೆ, ಅದು ಶಿವಸೇನೆಯ ಅಧಿಕೃತ ನಿಲುವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ತಲೆಮಾರಿನ ನಾಯಕರಲ್ಲಿ ಇಂತಹ ಭಾವನೆಗಳು ಮೂಡುವುದು ಸ್ವಾಭಾವಿಕ ಎಂದು ಗೋರೆ ಹೇಳಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 