ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಂಗಲಾ ಅಂಗಡಿ ಭೂಮಿ ಪೂಜೆ

ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಂಗಲಾ ಅಂಗಡಿ ಭೂಮಿ ಪೂಜೆ Mangala Angadi Bhoomi Puja for construction work of community hall

ಯರಗಟ್ಟಿ, 19 ; ಸಮೀಪದ ಗುಡಮಕೇರಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ 2023-24ನೇ ಸಾಲಿನ ಅಂದಾಜು ಮೊತ್ತ ರೂ. 5 ಲಕ್ಷದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಾಜಿ ಸಂಸದೆ ಮಂಗಲಾ ಅಂಗಡಿ ಭೂಮಿ ಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ, ಗ್ರಾ. ಪಂ. ಉಪಾಧ್ಯಕ್ಷ ಗುರು ವಾಲಿ, ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಮಾಜಿ ತಾ. ಪಂ. ಅಧ್ಯಕ್ಷ ಪರ್ವತಗೌಡ ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ, ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ, ಮಡಿವಾಳಪ್ಪ ಬಿದರಗಡ್ಡಿ, ಎಸ್‌. ಎಚ್‌. ನಾಯ್ಕರ, ಮಹಾದೇವ ಯಂಡ್ರಾವಿ, ಜಗದೀಶ ಕೌಜಗೇರಿ, ಈರಣ್ಣಾ ಹೊಸಮನಿ, ವಾಚಪೆ ಗುಡುಮಕೇರಿ, ಶಿವಪ್ಪ ಮಾದನ್ನವರ, ಮಲ್ಲಪ್ಪ ವಾರ್ಲಗಟ್ಟಿ, ಮಾಜಿ ಗ್ರಾ. ಸದಸ್ಯೆ ಅನ್ನವನ್ನು ನಾಯ್ಕರ, ಶಿವಪ್ಪ ಬಾಜನವರ, ಮಾರುತಿ ನಾಯ್ಕರ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು