ಕಪಿಲೇಶ್ವರ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಕಪಿಲೇಶ್ವರ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು  Man dies after slipping and falling in Kapileshwara well

ಬೆಳಗಾವಿ 23: ಇಲ್ಲಿನ ಶ್ರೀಕ್ಷೇತ್ರ ಕಪಿಲೇಶ್ವರ ಮಂದಿರದ ಹಿಂದಿನ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. 

ಕಪಿಲೇಶ್ವರ ಮಂದಿರದ ಹಿಂಬದಿಯಿರುವ ಮಹಾದೇವ ದೇವಸ್ಥಾನ ಹೊಂಡದಲ್ಲಿ ಭಾನುವಾರ ಮಧ್ಯಾನ್ಹ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ. ಮೃತರನ್ನು ಭಾಂದುರ್ ಗಲ್ಲಿಯ ನಿವಾಸಿ ಸಚಿನ್ ಮನೋಹರ್ ಪಾಟೀಲ್ (47) ಎಂದು ಗುರುತಿಸಲಾಗಿದೆ.  

ಸ್ಥಳಕ್ಕೆ ಖಡೇ ಬಝಾರ್ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.