ಕಲಕುಟಗರಗೆ ವಿಜಯಪುರಕ್ಕೆ ಸ್ವಾಗತಿಸಿದ ಮಲ್ಲಿಕಾರ್ಜುನ ಕೆಂಗನಾಳ

ಕಲಕುಟಗರಗೆ ವಿಜಯಪುರಕ್ಕೆ ಸ್ವಾಗತಿಸಿದ ಮಲ್ಲಿಕಾರ್ಜುನ ಕೆಂಗನಾಳ Mallikarjuna Kenganal welcomes Kalakutaga to Vijayapura

ಕಲಕುಟಗರಗೆ ವಿಜಯಪುರಕ್ಕೆ ಸ್ವಾಗತಿಸಿದ ಮಲ್ಲಿಕಾರ್ಜುನ ಕೆಂಗನಾಳ 

ವಿಜಯಪುರ  06: ಸ್ವಾತಂತ್ರ್ಯ, ಸಮಾನತೆ,ಪ್ರಜಾಪ್ರಭುತ್ವ ಉಳುವಿಗಾಗಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತಕ್ಕಾಗಿ ಬಾಗಲಕೋಟದ ಸಾಮಾಜಿಕ ಹೋರಾಟಗಾರ ನಾಗರಾಜ ಶಿ ಕಲಕುಟಗರ ಅವರು ರಾಜ್ಯದಲ್ಲಿ ಹಮ್ಮಿಕೊಂಡಿರುವ ಸ್ವಚ್ಛ ವಿಧಾನ ಸಭೆ ಜನ ಜಾಗೃತಿ ಅಭಿಯಾನದ ಅಂಗವಾಗಿ ವಿಜಯಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಹಾಗೂ ವಿವಿಧ ಮುಖಂಡರು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಮುಂದೆ ಹುಮಾಲೆ ಹಾಕಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನೀಡುವುದು ನಮ್ಮ ರೈತ ಭಾರತ ಪಕ್ಷದ ಉದ್ದೇಶವಾಗಿದೆ. ನಾಗರಾಜ ಕಲಕುಟಗರ ಅವರು ಹಮ್ಮಿಕೊಂಡಿರುವ ಸ್ವಚ್ಛ ವಿಧಾನ ಸಭೆ ಅಭಿಯಾನವು ಜನಪರವಾಗಿದ್ದು ಅವರ ಕಾರ್ಯ ಶ್ಲಾಘನೀಯವಾದದ್ದು ಅವರ ಈ ಅಭಿಯಾನಕ್ಕೆ ನಮ್ಮ ರೈತ ಭಾರತ ಪಕ್ಷ ಬೆಂಬಲಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಗೀರೀಶ ಕಲಘಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.