ಮಲ್ಲಿಕಾರ್ಜುನ ಹುಣಶ್ಯಾಳಗೆ ಭಗೀರಥ ಪ್ರಶಸ್ತಿ ಪ್ರದಾನ

 ಮಲ್ಲಿಕಾರ್ಜುನ ಹುಣಶ್ಯಾಳಗೆ ಭಗೀರಥ ಪ್ರಶಸ್ತಿ ಪ್ರದಾನ Mallikarjuna Hunashyala presented with Bhagiratha Award

 ಮಲ್ಲಿಕಾರ್ಜುನ ಹುಣಶ್ಯಾಳಗೆ ಭಗೀರಥ ಪ್ರಶಸ್ತಿ ಪ್ರದಾನ 

ವಿಜಯಪುರ 27: ದಿ. 26 ರಂದು ಜಿಲ್ಲಾ ಉಪ್ಪಾರ ಸೇವಾ ಸಂಘ, ವಿಜಯಪುರ ಹಾಗೂ ವಿಜಯಪುರ ಜಿಲ್ಲಾ ಉಪ್ಪಾರ ನೌಕರರ ಸಂಘ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಉಪ್ಪಾರ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಭಗೀರಥ ಪ್ರಶಸ್ತಿ ನೀಡಿ ಸನ್ಮಾನ ಮಾಡಿ ಗೌರವಿಸಲಾಯಿತು. 

ತಾಲೂಕಿನ   ಸವನಹಳ್ಳಿ  ಗ್ರಾಮದ ಸ್ವಾಮಿ ವಿವೇಕಾನಂದ ಸಮಗ್ರ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ಸಂಚಾಲಕರು ಹಾಗೂ ಅಧ್ಯಕ್ಷರಾದ ಮಲ್ಲಿಕಾರ್ಜುನ ಹುಣಶ್ಯಾಳ ಇವರು ಸಾಮಾಜಿಕ ಕಾಳಜಿ ಹಾಗೂ ಸಮಾಜ ಸೇವೆ ಮತ್ತು ಸರಕಾರಿ ಶಾಲೆಗಳ ಹಾಗೂ ಗ್ರಾಮದ ಯುವಕರ ಅಭಿವೃದ್ಧಿಗೆ ಇವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಗೀರಥ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಕ್ಕಪ್ಪ ಯಡವೆ, ಪುಂಡಲೀಕ ಉಪ್ಪಾರ, ಸಂಗಪ್ಪ ಪಡಸಲಗಿ, ಶ್ರೀನಿವಾಸಿದ್ದು ವಿಶ್ವನಾಥ ಶಿವಶಂಕರ ಶ್ರೀಶೈಲ ಅಂಬಲಿ ಸಿದ್ದು ಪಡಸಲಗಿ ಇದ್ದರು.