ಮಕರ ಸಂಕ್ರಾಂತಿ ಸುಗ್ಗಿ ಹಬ್ಬ ಆಚರಣೆ
Makar Sankranti harvest festival celebration
ಜಮಖಂಡಿ 18: ಅಂಗನವಾಡಿ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ಚಿಕ್ಕಮಕ್ಕಳು ವಿವಿಧ ವೇಷಭೂಷಣದೊಂದಿಗೆ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆರು, ಮುಖ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸೇರಿ ಅಂಗನವಾಡಿ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ಆಚರಿಸಿದರು.
ನಗರದ ರುದ್ರಸ್ವಾಮಿ ಪೇಠ ಗಲ್ಲಿಯ ಸಮಗಾರ ಗಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ರುದ್ರಸ್ವಾಮಿ ಪೇಠ (ಎ) ರುದ್ರಸ್ವಾಮಿ ಪೇಠ (ಬಿ) ಬಾರ್ೇಟ್ ಗಲ್ಲಿ ನಂ,2, ಅಂಗನವಾಡಿ ಕೇಂದ್ರಗಳು ಸೇರಿಕೊಂಡು ಬಾಲವಿಕಾಸ ಸಲಹಾ ಸಮಿತಿ ಸಹಯೋಗದಲ್ಲಿ ಮಕರ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.
ಮಕರ ಸಂಕ್ರಾಂತಿ ಸುಗ್ಗಿ ಹಬ್ಬದಲ್ಲಿ ಕಬ್ಬುಗಳು, ಮಡಿಕೆಗಳು, ವಿವಿಧ ಬಗೆಯ ಧವಸ, ಧಾನ್ಯಗಳು, ಗೊಂಬೆಗಳು ಹೀಗೆ ಹಲವು ಬಗೆಯ ಸಾಮಗ್ರಿಗಳ ಜೊತೆಗೆ ರಂಗೋಲಿಯ ಚಿತ್ತಾರಗಳಲ್ಲಿ ಸಂಕ್ರಾತಿ ಸುಗ್ಗಿಯ ಹಬ್ಬವನ್ನು ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ದಾನಮ್ಮ ಅಥಣಿ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಎಸ್.ಎ.ಪೂಜಾರಿ, ಶ್ರೀಮತಿ ಎಮ್.ಎಸ್.ಬಳೋಲಗಿಡದ, ಶ್ರೀಮತಿ ಸಿ.ಎಮ್.ಲಗಳಿ, ಶ್ರೀಮತಿ ರೇಖಾ ತರತರಿ, ಆಶಾ ಕಾರ್ಯಕರ್ತೆಯರಾದ ಸುನೀತಾ ಜಂಬಗಿ, ಸವಿತಾ ಹೊಳೆಪ್ಪಗೋಳ, ನಾಗಮ್ಮ ಐನಾಪೂರ, ಬಾಲವಿಕಾಸ ಸಲಹಾ ಸಮಿತಿ ಅಧ್ಯಕ್ಷತೆ ಗಾಯಿತ್ರಿ ಬಿದರಿ, ಅಕ್ಷತಾ ಬಳೋಲಗಿಡದ, ಕಾವೇರಿ ಲಗಳಿ, ಲಕ್ಷ್ಮಿ ಗೌಳಿ, ಕೆ.ಬಿ.ಕಾಲತಿಪ್ಪಿ, ಶಾರದಾ ಮೀಶಿ, ಗೀತಾ ಜೋರಾಪೂರ, ಎಮ್.ಬಿ.ಕರಾಬಿ, ಛಲವಾದಿ ಮಹಾಸಭಾ ಅಧ್ಯಕ್ಷ ಶಶಿಕಾಂತ ತೇರದಾಳ, ರವಿ ದೊಡಮನಿ, ಸಿದ್ದು ಕಾಂಬಳೆ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 