ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು: ಧನಂಜಯಕುಮಾರ
ಮುಧೋಳ: ಮನೆ, ಮನಸ್ಸು, ಆರೋಗ್ಯ ಚನ್ನಾಗಿ ಇರಬೇಕಾದರೆ. ಆಹಾರ ಪದ್ಧತಿಯನ್ನು ಅಳವಡಿಕೊಳ್ಳಬೇಕು. ಮಹಿಳೆ ಕುಟುಂಬ ನಾಯಕಿ, ಮಹಿಳೆ ಸಧೃಡವಿದ್ದರೆ ಕುಟುಂಬ ಸರಿ ಇರುವುತ್ತದೆ. ಎಂದು ತಾಲೂಕಾ ಯೋಜನಾ ಅಧಿಕಾರಿ ಧನಂಜಯಕುಮಾರ ಹೇಳಿದರು. ತಾಲೂಕಿನ ನಾಗರಾಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾ ಅಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮುಧೋಳ, ಸಿರಿ ಗ್ರಾಮೋಧ್ಯೋಗ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಗಭರ್ಿಣಿ ಸ್ತ್ರೀಯರಿಗೆ, ಬೆಳೆಯುವ ಮಕ್ಕಳಿಗೆ, ಮಹಿಳೆಯರಿಗೆ ಪುಷ್ಟಿ ವಿತರಣೆ ಮಾಡಿ ಪೌಷ್ಠಿಕ ಆಹಾರದ ಮಹತ್ವವನ್ನು ತಿಳಿಸಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಎಮ್. ಮಹಾದೇವಿ ಮಾತನಾಡಿ ಸಂಘದ ಮಹಿಳಾ ಸದಸ್ಯರು ಮಾಡಿಕೊಂಡು ಬಂದ ಅಡುಗೆ ಬಗ್ಗೆ ವಿವರಿಸಿ ಶಿಸ್ತಿಗೆ ಇನ್ನೊಂದು ಹೆಸರೇ ಮಹಿಳೆ ಆಗಬೇಕೆಂದರು.
ಮಳಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ|| ಕ್ರಾಂತಿ ಲೋಕರೆ, ಉದ್ಘಾಟಿಸಿದರು. ಆರೋಗ್ಯ ಕೇಂದ್ರ ಮೇಲ್ವಿಚಾಲಕರು, ಕಿರಿಯ ಆರೋಗ್ಯ ಸಹಾಯಕರು, ಗ್ರಾ.ಪಂ. ಸದಸ್ಯರು ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಗೀತಾ ಕತ್ತಿ, ಸ್ವಾಗತಿಸಿದರು. ಸುಶಿಲಾ ಭಜಂತ್ರಿ, ಪ್ರಾಥರ್ಿಸಿದರು, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶಾಂತಾ ಭಜಂತ್ರಿ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 