ಮಹಾತ್ಮರ ಚರಿತ್ರೆ ಅಂತಃಕರಣ ಶುದ್ದಿಗೊಳಿಸುತ್ತದೆ: ಶಂಕರಾನಂದ ಶ್ರೀ
ಮುಧೋಳ 13: ಮಹಾತ್ಮ ಪವಿತ್ರ ಚರಿತ್ರೆಯನ್ನು ಶ್ರದ್ಧೆಯಿಂದ ಕೇಳುವ ಜನರ ಅಂತಃಕರಣ ಶುದ್ದಿಗೋಳಿಸಿ ಸಕಲ ಸೌಭಾಗ್ಯಗಳನ್ನು ನೀಡುತ್ತವೆ ಎಂದು ಶ್ರೀ ಗುರುನಾಥಾರೂಢರ ಮಠದ ಸಂಸ್ಥಾಪಕರಾದ ಶಂಕರಾನಂದ ಶ್ರೀಗಳು ಹೇಳಿದರು.
ಅವರು ತಾಲೂಕಿನ ಕುಳಲಿ ಗ್ರಾಮದ ಗುರುನಾಥಾರೂಢರ ಮಠದಲ್ಲಿ ಜನೇವರಿ 16,17,18ರಂದು ನಡೆಯುವ 14ನೇ ವೇದಾಂತ ಪರಿಷತ್ತಿನ ಅಂಗವಾಗಿ 7 ದಿನ ನಡೆಯುವ ಜಗದ್ಗುರು ಸಿದ್ಧಾರೂಢರ ಪುರಾಣ ಪ್ರಾರಂಭೋತ್ಸವನ್ನು ನೇರವೆರಿಸಿ ಮಾತನಾಡುತ್ತಾ ಮಹಾತ್ಮರ ದರ್ಶನ, ಸ್ಪರ್ಶನ, ಸಂಭಾಷನೆ, ಮಹಾತ್ಮರ ಪವಿತ್ರ ಚರಿತ್ರೆಗಳು ಬದುಕನ್ನು ಪಾವನಗೊಳಿಸುತ್ತದೆ ಎಂದರು. ಮುಗಳಖೋಡ ಶಿವಾನಂದ ಭಾರತಿ ಆಶ್ರಮದ ಶಿವಾನಂದ ಶ್ರೀಗಳು, ಮಲ್ಲೇಶ್ವರ ಶರಣರು, ಶ್ರೀಮನ್ ನಿಜಗುಣ ಶಿವಯೋಗಿಯ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಉಪಸ್ಥಿತರಿದ್ದರು. ದಿ: 9 ರಿಂದ 15ರ ವರೆಗೆ ಪ್ರತಿ ದಿನ 7-30 ರಿಂದ 8-30ರ ವರೆಗೆ ಹಡಗಿನಾಳದ ಮಲ್ಲೇಶ್ವರ ಶರಣರು ಸಿದ್ಧ ಚರಿತ್ರೆಯನ್ನು ನಡೆಸಿಕೊಡುತ್ತಿದ್ದಾರೆ. ಕುಳಲಿಯ ಹಾಗೂ ಸುತ್ತಮುತ್ತಲಿನ ಕಲಾವಿದರಿಂದ ಭಜನಾ ಸೇವೆ ನಡೆಯುತ್ತಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 