ವಿಶ್ವ ಹಿಂದು ಪರಿಷತ್, ಭಜರಂಗದಳ ಸಹಯೋಗದಲ್ಲಿ ಮಹಾಸತ್ಸಂಗ ಸಮಾವೇಶ ಕಾರ್ಯಕ್ರಮ
Mahasatsang conference program in collaboration with Vishwa Hindu Parishad and Bajrang Dal
ಜಮಖಂಡಿ 20 : ವಿಶ್ವ ಹಿಂದು ಪರಿಷತ್, ಭಜರಂಗದಳ ಸಹಯೋಗದಲ್ಲಿ ಮಹಾಸತ್ಸಂಗ ಸಮಾವೇಶ ಕಾರ್ಯಕ್ರಮ ಜೂ, 21 ರಂದು ಅದ್ದೂರಿಯಾಗಿ ಜರುಗಿಲಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಉಮೇಶ ಸಿದ್ದರಡ್ಡಿ ತಿಳಿಸಿದರು.
ಇಲ್ಲಿನ ಚೌಡಯ್ಯ ನಗರದ ನಮಸ್ಕಾರ ಮಂಡಳಿ ಹಾಗೂ ವಿಶ್ವ ಹಿಂದು ಪರಿಷತ್ ಸಭಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 21 ರಂದು ಮುಂಜಾನೆ 10 ಗಂಟೆಗೆ ವಿವಿಧ ಮಠಾಧೀಶರು ಹಾಗೂ ಸಂತರ ಆಗಮನ ಹುಲ್ಯಾಳ ಗುರುದೇವಾಶ್ರಮದಲ್ಲಿ ನಡೆಯುವದು. 10-30 ಕ್ಕೆ ಪೂಜ್ಯರು ಹಾಗೂ ಸಂತರರಿಂದ ಚಿಂತನ ಗೋಷ್ಠಿ ಮತ್ತು 2ನೇ ಗೋಷ್ಠಿ ನಂತರ ಪೂಜ್ಯರ ಪ್ರಸಾದ. ಮಧ್ಯಾಹ್ನ 2 ಗಂಟೆಗೆ ಓಲೇಮಠದಿಂದ ಬಸವ ಭವನದವರಗೆ ಶ್ರೀಗಳ ಪಾದಯಾತ್ರೆ ಹಾಗೂ 1008 ಕುಂಬ ಹೊತ್ತ ಮಹಿಳೆಯರಿಂದ ಮತ್ತು ಸಕಲ ವಾದ್ಯಮೇಳದೊಂದಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಶೋಭಾಯಾತ್ರೆ ಜರುಗುವದು. ಸಾಯಂಕಾಲ 4 ಗಂಟೆಗೆ ಬಸವ ಭವನದಲ್ಲಿ ಸಾರ್ವಜನಿಕರ ಸಭೆ ಮತ್ತು ಶ್ರೀಗಳ ಆಶೀರ್ವಚನ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಜನ ವಿವಿಧ ಮಠಾಧೀಶರು, ಸಂತರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಲಗೂರ ಧರಿದೇವರ ಮಠದ ಲಕ್ಷ್ಮಣ ಮುತ್ಯಾ, ಹಣಮಂತ ಗಿರಡ್ಡಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಸಾಗರ ಜಂಬಗಿ, ಗೀರೀಶ ಕೆಂಗನಾಳ, ಕರೆಪ್ಪ ಜಂಬಗಿ ಸೇರಿದಂತೆ ವಿಶ್ವ ಹಿಂದು ಪರಿಷತನ ಪದಾಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 