ಮಹರ್ಷಿ ವಾಲ್ಮೀಕಿ ಪ.ಸ.ಸಂಘಕ್ಕೆ ರೂ 19 ಲಕ್ಷ ಲಾಭ
Maharishi Valmiki P.S. Sangh earns Rs 19 lakh profit
ಹೂವಿನಹಡಗಲಿ 18 : ಇಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ನಿ. ಕಳೆದ ಆರ್ಥಿಕ ವರ್ಷ ದಲ್ಲಿ ರೂ. 22.803796 ಸಾಲ ವಿತರಿಸಿ ರೂ. 19.79160 ನಿವ್ವಳ ಲಾಭ ಗಳಿಸಿದೆ ಎಂದು ಅದ್ಯಕ್ಷ ಊಳಿಗದ ಹನುಮಂತಪ್ಪ ಹೇಳಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸೊಸೈಟಿಯ 7ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.’ಸದಸ್ಯರ ಸಹಕಾರ ಹಾಗೂ ಗ್ರಾಹಕರು ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿರುವುದರಿಂದ ಸೊಸೈಟಿ ಪ್ರತಿವರ್ಷವೂ ಲಾಭ ಗಳಿಸುತ್ತಿದೆ. ಆರ್ಥಿಕ ಶಿಸ್ತು ಕಾಪಾಡುವ ದಿಸೆಯಲ್ಲಿ ವಸೂಲಾತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಸದಸ್ಯರು ಸೊಟೈಟಿಯಲ್ಲಿನ ಸಾಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.ಸಮಾಜದ ಮುಖಂಡರಾದ ಎಲ್.ಜಿ.ಹೊನ್ನಪ್ಪ ಮಾತನಾಡಿದರು. ಸಭೆಯಲ್ಲಿ ಉಪಾದ್ಯಕ್ಷ ಎಂ.ವಿ. ಗಂಗಾವತಿ. ನಿರ್ದೇಶಕ ರಾದ ಟಿ.ಮಹಾಂತೇಶ. ಲಕ್ಷ್ಮಣ. ಯು.ಹನುಮಂತಪ್ಪ. ಎನ್.ಕೋಟೆಪ್ಪ. ಜ.ದೇವೇಂದ್ರ ಪ್ಪ. ಕೆ.ವಿಶಾಲಕ್ಷಮ್ಮ. ದೀಪದ ಕೃಷ್ಣ. ಯು.ಮಲ್ಲಿಕಾರ್ಜುನ ಇದ್ದರು.ರಾಮಣ್ಣ ಪ್ರಾರ್ಥನೆ ನಂತರ ಜೆ.ಪರಸಪ್ಪ ಸ್ವಾಗತಿಸಿದರು.
ಇದೇ ವೇಳೆ 10ನೇತರಗತಿ.ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಲಾಯಿತು ಜತೆಗೆ ರಾಷ್ಟ್ರ ಪದಕ ಪಡೆದ ಡಿವೈಎಸ್ ಪಿ ವೆಂಕಟಪ್ಪ ಹಾಗೂ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕ್ಕೆ ? 5ಲಕ್ಷ ರೂ.ದೇಣಿಗೆ ನೀಡಿದ ಸುಶೀಲಾ ಮ್ಮ ಅವರನ್ನು ಸನ್ಮಾನಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 