ಮಹಾಂತೇಶ ಅರ್ಬನ್ ಕೋ-ಆಫ್-ಕ್ರೇಡಿಟ್ ಸೊಸೈಟಿ ಶಾಖೆ ಉದ್ಘಾಟನೆ
Mahantesh Urban Co-op-Credit Society branch inaugurated
ಯರಗಟ್ಟಿ, 13 : ಸಮೀಪದ ಕಟಕೋಳ ಹಾಗೂ ಯರಗಟ್ಟಿ ಪಟ್ಟಣದಲ್ಲಿ ಆರಂಭಗೊಂಡ ನೂತನ ದಿ. ಮಹಾಂತೇಶ ಅರ್ಬನ್ ಕೋ ಆಫ್ ಕ್ರೇಡಿಟ್ ಸೊಸೈಟಿ ಶಾಖೆಗಳನ್ನು ಮಹಾಬಳೇಶ್ವರ ಹಾದಿಮನಿ ಉದ್ಘಾಟಿಸಿದರು.ಸಂಘದ ಅಧ್ಯಕ್ಷರಾದ ಶಶಿಧರ ಮಾಳವಾಡ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕಟಕೋಳ ಹಾಗು ಯರಗಟ್ಟಿ ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರಾದ ಮಹಾದೇವ ಆತಾರ ಮತ್ತು ಪರುತಗೌಡ ಪಾಟೀಲ ಅವರ ಮುಂದಾಳತ್ವದಲ್ಲಿ ಮಹಾಲಕ್ಷ್ಮೀ ಪೂಜೆಯೊಂದಿಗೆ ನೇರವೇರಿಸವಾಯಿತು.
ಸಂಸ್ಥೆಯ ಪ್ರಧಾನ ಕಛೇರಿ ಪ್ರಸ್ತುತ ವರ್ಷಕ್ಕೆ 12 ಕೋಟಿಗು ಅಧಿಕ ಠೇವು ಸಂಗ್ರಹ ಮಾಡಿದ್ದು 13 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮತ್ತು 12 ಕೋಟಿಗೂ ಅಧಿಕ ಸಾಲ ವಸೂಲಿ ಮಾಡಲಾಗಿದೆ. ರೂ. 22.58 ಲಕ್ಷ ಲಾಭದಲ್ಲಿದ್ದು 2500ಕ್ಕೂ ಹೆಚ್ಚಿನ ಶೇರುದಾರರನ್ನು ಹೊಂದಿರುವ ಸಂಘದ ದುಡಿಯುವ ಬಂಡವಾಳ ರೂ. 15 ಕೋಟಿಗಿಂತ ಹೆಚ್ಚಾಗಿದೆ. ಸಂಘವು ಪಗ್ರತಿಯತ್ತ ಮುನ್ನಡೆಯುವಲ್ಲಿ ಆಡಳಿತ ಮಂಡಳಿಯವರು ವಿಶೇಷವಾಗಿ ಪ್ರಯತ್ನಿಸುತ್ತಿದ್ದು ಮತ್ತು ಸಂಘದ ಸದಸ್ಯರಿಗೆ ಹಣಕಾಸು ಬೇಡಿಕೆಯನ್ನು ಸಕಾದಲ್ಲಿ ದೊರೆಯುವಂತೆ ಆಸಕ್ತಿ ವಹಿಸಿದ್ದಾರೆಂದು ತಿಳಿಸಿದರು.
ಈ ಸಹಕಾರಿ ಸಂಘಗಳು ಉತ್ತಮ ಬೆಳವಣಿಗೆ ಹೊಂದಬೇಕಾದರೆ ಸಾಲಗಾರರು ಸರಿಯಾದ ಸಮಯಕ್ಕೆ ತಾವು ಪಡೆದ ಸಾಲವನ್ನು ಮರುಪಾವತಿ ಮಾಡಬೇಕು . ಸಾಲಗಾರರಷ್ಟೆ ಠೇವುದಾರರು ಸಂಘಕ್ಕೆ ಪ್ರಮುಖವಾಗಿ ಬೇಕು ಮತ್ತು ಸಿಬ್ಬಂದಿ ಹಾಗು ಆಡಳಿತಮಂಡಳಿ ಸದಸ್ಯರು ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.ಈ ವೇಳೆ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಬಸವರಾಜ ಯಾದವಾಡ, ನಿರ್ದೇಶಕರಾದ ಮಹಾದೇವಪ್ಪ ಕಲಹಾಳ, ಶಶಿಕಾಂತ ಧಡೇದ, ಶಿವಾನಂದ ಅಂಗಡಿ, ಜಗದೀಶ ಲಾಹೋಟಿ, ಗೋವಿಂದ ಮಡ್ಡಿ, ಶಂಕರ ಸೂಳಿಬಾವಿ,
ಶರಣಪ್ಪ ಸಕ್ತಿ, ಅರುಣಕುಮಾರ ಶಿದ್ದಿಬಾವಿ, ಬಾಲಮುಕುಂದ ಮಹಾಲಿಂಗಪೂರಕರ, ಮನೋಹರ ಹೊನ್ನುಂಗರ ಪುಷ್ಪಾ ಇಟ್ಟಂಗಿಹಾಳ, ಮಧು ಜಂಬಗಿ, ದೀಪಕ ಅರಿಬೆಂಚಿ, ಕೃಷ್ಣ ಮೇದಾರ, ಪುಂಡಲೀಕ ಚನ್ನದಾಸರ ಹಾಗೂ ಕಟಕೋಳ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಸಂಗಮೆಶ ಶೆಟ್ಟಿಸದಾವರ್ತಿ, ಸಂಗಮೇಶ ಅಡ್ಡಣಗಿ, ಬಾಳನಗೌಡ ಹೊಸಮನಿ, ನಾಗೇಂದ್ರ ತೋಡಕರ, ಬಸವರಾಜ ದಿವಟಗಿ, ವೇಂಕಟೇಶ ಜಾಧವ, ಶಂಕರಗೌಡ ಪಾಟೀಲ, ಮಹಾಂತೇಶ ತುಪ್ಪದ, ಗಜಾನನ ಪಾರಶೆಟ್ಟಿ ಮತ್ತು ಯರಗಟ್ಟಿ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಶಿವಣ್ಣ ಹಂಜಿ, ಈರ್ಪ ಬೆಣ್ಣಿ, ಧರ್ಮಣ್ಣ ಪಡಸಲಗಿ, ದುಂಡಪ್ಪ ದೇವರಡ್ಡಿ, ಭಿಮಪ್ಪ ತಡಸಲೂರ, ಉಮೆಶ ಮಾಗುಂಡನವರ, ಮಹಾಂತೇಶ ಜಕಾತಿ, ಮೋಹನ ಹಾದಿಮನಿ ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 